alex Certify ಈ ರಾಶಿಯವರಿಗೆ ಕಾದಿದೆ ಇಂದು ಶುಭ ಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರಿಗೆ ಕಾದಿದೆ ಇಂದು ಶುಭ ಸುದ್ದಿ

ಮೇಷ : ನಿಮ್ಮ ಪ್ರಾಮಾಣಿಕತನಕ್ಕೆ ಉತ್ತಮ ಮನ್ನಣೆ ದೊರಕಲಿದೆ. ಕಚೇರಿಯಲ್ಲಿ ಯಾವುದೇ ಕಾರಣಕ್ಕೂ ಒತ್ತಡಕ್ಕೆ ಒಳಗಾಗಬೇಡಿ. ಪ್ರಯಾಣ ಮಾಡುವ ವೇಳೆ ಎಚ್ಚರಿಕೆಯಿಂದಿರಿ. ದಾನ – ಧರ್ಮಗಳನ್ನ ಮಾಡಿ.

ವೃಷಭ : ಈ ದಿನ ನಿಮಗೆ ಮಿಶ್ರ ಫಲ ನೀಡಲಿದೆ. ಕುಟುಂಬದಲ್ಲಿ ಕೊಂಚ ಕಿರಿಕಿರಿ ಉಂಟಾಗಬಹುದು. ವ್ಯಾಪಾರಿಗಳಿಗೆ ಹಿನ್ನಡೆ ಕಾದಿದೆ. ಎಲೆಕ್ಟ್ರಾನಿಕ್​ ಉದ್ಯಮದವರಿಗೆ ಇದು ಸಾಮಾನ್ಯ ದಿನವಾಗಿದೆ. ಕಚೇರಿಯಲ್ಲಿ ಯಾವುದೇ ತೊಂದರೆ ಇರೋದಿಲ್ಲ.

ಮಿಥುನ : ಇಂದು ನಿಮ್ಮ ಮನಸ್ಸು ಶಾಂತ ರೀತಿಯಲ್ಲಿ ಇರಲಿದೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿದೆ. ಕೌಟುಂಬಿಕ ಜೀವನದಲ್ಲಿ ನೆಮ್ಮದಿ ಇದೆ. ಹಣಕಾಸಿನ ವ್ಯವಹಾರಗಳು ಸರಾಗವಾಗಿ ನಡೆಯಲಿದೆ. ಕುಲದೇವತೆಯನ್ನ ಮನಸ್ಸಿನಿಂದ ಆರಾಧಿಸಿ.

ಕಟಕ : ನಿಮ್ಮ ಅತೀ ಸ್ವಾಭಿಮಾನತನವೇ ಕೆಲವೊಮ್ಮೆ ನಿಮ್ಮ ಸಂಕಷ್ಟದ ಸ್ಥಿತಿಗೆ ನೂಕಬಹುದು. ಕಚೇರಿಯಲ್ಲಿ ಮೇಲಾಧಿಕಾರಿಗಳ ವಿಶ್ವಾಸಗಳಿಸಲು ಯತ್ನಿಸುತ್ತೀರಿ. ಮನೆಯಲ್ಲಿ ನೆರೆಹೊರೆಯವರೊಡನೆ ಕಿರಿಕಿರಿ ಉಂಟಾಗಬಹುದು.

ಸಿಂಹ : ನೀವು ಅಂದುಕೊಂಡ ಕಾರ್ಯವು ಕೈಗೂಡದೇ ಹೋಗಬಹುದು. ಅತೀ ಆಕ್ರೋಶ ಒಳ್ಳೆಯದಲ್ಲ. ಸಂಗಾತಿಯ ಮಾತನ್ನ ಆಲಿಸಿ. ಪೋಷಕರ ಆರೋಗ್ಯದ ಕಡೆ ಲಕ್ಷ್ಯ ನೀಡಿ. ಕಚೇರಿ ಕೆಲಸದ ನಿಮಿತ್ತ ದೂರ ಪ್ರಯಾಣ ಮಾಡಬೇಕಾಗಿ ಬರಬಹುದು.

ಕನ್ಯಾ : ಆಪ್ತರಿಂದಲೇ ನೀವು ಮೋಸಕ್ಕೆ ಒಳಗಾಗಲಿದ್ದೀರಿ. ಬೆನ್ನ ಹಿಂದೆ ಚೂರಿ ಹಾಕುವವರ ವಿರುದ್ಧ ಎಚ್ಚರಿಕೆಯಿಂದಿರಿ. ಕಚೇರಿಯಲ್ಲಿ ಯಾರನ್ನೂ ನಂಬಲೇಬೇಡಿ. ಮನೆಯಲ್ಲಿ ಶಾಂತಿ ನೆಲೆಸಲಿದೆ. ಗರ್ಭಿಣಿಯರು ಆರೋಗ್ಯದ ಕಡೆ ಗಮನ ಕೊಡಿ.

ತುಲಾ: ಸಂಕಷ್ಟದಲ್ಲಿದ್ದ ನಿಮ್ಮ ಜೀವನ ನಿಧಾನವಾಗಿ ತಹಬದಿಗೆ ಬರಲಿದೆ. ಶಿವನ ಆರಾಧನೆ ಮಾಡಿ. ಜವಳಿ ಉದ್ಯಮಿಗಳಿಗೆ ಲಾಭ ಕಾದಿದೆ. ರಾಜಕೀಯ ರಂಗದಲ್ಲಿ ಇರುವವರಿಗೆ ಅಹಂಕಾರಿ ಎಂಬ ಅಪಖ್ಯಾತಿ ಸಿಗುವ ಸಾಧ್ಯತೆ ಇದೆ.

ವೃಶ್ಚಿಕ : ನಿಮ್ಮಿಂದ ಸಹಾಯ ಪಡೆದವರು ನಿಮಗೆ ವಿಶೇಷ ರೀತಿಯಲ್ಲಿ ಧನ್ಯವಾದ ಸಲ್ಲಿಸಲಿದ್ದಾರೆ. ಬೇರೆಯವರ ವಿಚಾರದಲ್ಲಿ ಮೂಗು ತೂರಿಸುವ ಬುದ್ಧಿಯನ್ನ ಇನ್ನಾದರೂ ಬಿಡಿ. ರಾಹು – ಕೇತುವಿನ ಕಾಟವಿದೆ. ದೂರ ಪ್ರಯಾಣ ಒಳ್ಳೆಯದಲ್ಲ.

ಧನು : ಮನೆಯಲ್ಲಿ ಮಂಗಳ ಕಾರ್ಯ ನಡೆಯುವ ಬಗ್ಗೆ ಮುನ್ಸೂಚನೆ ಸಿಗಲಿದೆ. ಕಚೇರಿಯಲ್ಲಿ ನೀವು ಮಾಡಿದ ಸಣ್ಣ ತಪ್ಪು ಕಾರ್ಯ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿಬಿಡಬಹುದು. ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿರುವವರಿಗೆ ಶುಭ ಸುದ್ದಿ ಕಾದಿದೆ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶವಿದೆ.

ಮಕರ : ಜಡತ್ವವನ್ನ ತೊರೆದು ಕೆಲಸದ ಕಡೆ ಗಮನ ನೀಡಿ. ಇಂದು ಯಾವುದೇ ಕಾರ್ಯಕ್ಕೂ ಹೂಡಿಕೆ ಮಾಡಬೇಡಿ. ಮಿತ್ರರಿಂದ ಆರ್ಥಿಕ ಸಹಾಯ ದೊರಕಲಿದೆ.

ಕುಂಭ : ಗುರುವಿನ ಕೃಪೆಯಿಂದ ಕೆಲಸ ಕಾರ್ಯ ಸುಗಮವಾಗಿ ನಡೆಯಲಿದೆ. ಹಿತಶತ್ರುಗಳ ಕಾಟ ಇರಲಿದೆ. ಮನೆಯಲ್ಲಿ ಶಾಂತಿ ನೆಲೆಸಲಿದೆ. ವಿವಾಹ ಸಂಬಂಧಕ್ಕೆ ಹುಡುಕಾಟ ನಡೆಸುತ್ತಿರುವವರಿಗೆ ಶುಭ ಸುದ್ದಿ ಕಾದಿದೆ.

ಮೀನ : ನೀವು ಮಾಡುವ ಒಳ್ಳೆಯ ಕಾರ್ಯಗಳಿಗೆ ದುರ್ಗಾ ದೇವಿ ಅನುಗ್ರಹ ಇರಲಿದೆ. ಹಣಕಾಸು ವ್ಯವಹಾರ ಉತ್ತಮವಾಗಿ ಇರಲಿದೆ. ರಾಜಕೀಯ, ವೈದ್ಯಕೀಯ ರಂಗದವರಿಗೆ ಇಂದು ಒಳ್ಳೆಯ ದಿನ. ಆಂಜನೇಯನನ್ನ ಪ್ರಾರ್ಥಿಸಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...