alex Certify ಈ ರಾಶಿಯವರಿಗೆ ಇಂದು ಶುಭ ಸುದ್ದಿ ಕಾದಿದೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರಿಗೆ ಇಂದು ಶುಭ ಸುದ್ದಿ ಕಾದಿದೆ

ಮೇಷ : ಭವಿಷ್ಯದ ಬಗ್ಗೆ ಅತಿಯಾದ ಚಿಂತೆ ಬೇಡ. ಈ ರೀತಿ ಮಾಡೋದ್ರಿಂದ ನೀವು ವರ್ತಮಾನವನ್ನ ಹಾಳು ಮಾಡಿಕೊಳ್ಳಲಿದ್ದೀರಿ. ಸಂಬಂಧಿಗಳಿಂದ ಉತ್ತಮ ಸಲಹೆಯನ್ನು ಸ್ವೀಕರಿಸಲಿದ್ದೀರಿ. ನವದಂಪತಿಗೆ ಸಂತಾನ ಭಾಗ್ಯವಿದೆ. ಗುರುರಾಘವೇಂದ್ರನನ್ನು ಆರಾಧಿಸಿ.

ವೃಷಭ : ಹೊಗಳಿಕೆಯ ಮಾತುಗಳಿಗೆ ಮರಳುಗಾಬೇಡಿ. ಇದು ನಿಮ್ಮನ್ನ ಸಂಹಾರ ಮಾಡುವ ತಂತ್ರವೂ ಆಗಿರಬಹುದು ಎಚ್ಚರಿಕೆಯಿಂದಿರಿ. ಕಚೇರಿಯಲ್ಲಿ ಸಹೋದ್ಯೋಗಿಗಳ ಜೊತೆ ಉತ್ತಮ ಸಂಬಂಧ ಹೊಂದಲಿದ್ದೀರಿ. ಬಹುಕಾಲದಿಂದ ಕೂಡಿಟ್ಟಿದ್ದ ಹಣ ಇಂದು ಕಷ್ಟ ನಿವಾರಣೆಗೆ ಆಸರೆಯಾಗಲಿದೆ.

ಮಿಥುನ : ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ಕುಟುಂದವರ ಜೊತೆ ಅಮೂಲ್ಯ ಸಮಯವನ್ನು ಕಳೆಯಲಿದ್ದೀರಿ. ಕಚೇರಿಯಲ್ಲಿ ಮೇಲಾಧಿಕಾರಿಗಳಿಂದ ಪ್ರಶಂಸೆಯ ಮಾತು ಕೇಳಿ ಬರಲಿದೆ. ನಿಮ್ಮ ನಿರೀಕ್ಷೆಗೆ ತಕ್ಕ ಆದಾಯ ಸಿಗಲಿದೆ.

ಕಟಕ : ಉದ್ಯಮ ಕ್ಷೇತ್ರದಲ್ಲಿ ಇರುವವರು ಆತುರವಾಗಿ ಯಾವುದೇ ನಿರ್ಧಾರಕ್ಕೆ ಬರಬೇಡಿ. ಯಾವುದೇ ಹೂಡಿಕೆ ಮಾಡುವ ಮುನ್ನ ಎಚ್ಚರಿಕೆ ಅತ್ಯಗತ್ಯ. ಸಂಗಾತಿಯಿಂದ ಉತ್ತಮ ಸಲಹೆ ಪಡೆಯಲಿದ್ದೀರಿ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಹುಡುಕಿಕೊಂಡು ಬರಲಿದೆ.

ಸಿಂಹ : ಮನೆಯ ಪೀಠೋಪಕರಣಗಳ ಖರೀದಿಗಾಗಿ ಧನವ್ಯಯವಾಗಲಿದೆ. ಬಹುಕಾಲದಿಂದ ಹೊಸ ಉದ್ಯಮ ಆರಂಭಿಸಬೇಕು ಎಂಬ ನಿಮ್ಮ ಕನಸು ಇಂದು ನನಸಾಗಲಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡು ಬರಲಿದೆ. ವೈದ್ಯಕೀಯ ವೃತ್ತಿಯವರಿಗೆ ಲಾಭವಿದೆ.

ಕನ್ಯಾ : ರಾಜಕೀಯ ರಂಗದಲ್ಲಿ ಇರುವವರು ಸಾರ್ವಜನಿಕ ಜೀವನದಲ್ಲಿ ಮನ್ನಣೆಗೆ ಪಾತ್ರರಾಗಲಿದ್ದೀರಿ. ನಿಮ್ಮ ಚಿಕ್ಕ ತಪ್ಪಿನಿಂದ ಉದ್ಯಮದಲ್ಲಿ ನಿಮ್ಮ ಸ್ಪರ್ಧಾಳುಗಳಿಗೆ ಲಾಭ ಉಂಟಾಗುವ ಸಾಧ್ಯತೆ ಇದೆ . ಹೀಗಾಗಿ ಎಚ್ಚರಿಕೆಯಿಂದಿರಿ. ಇದು ದೂರ ಪ್ರಯಾಣ ಮಾಡುವುದಕ್ಕೆ ಹೋಗದಿರಿ.

ತುಲಾ : ಆಸ್ತಿ ಖರೀದಿ ಮಾಡಲಿದ್ದೀರಿ. ಸಂಗಾತಿಯ ಆರೋಗ್ಯ ಹದಗೆಡುವ ಸಾಧ್ಯತೆ ಇದೆ. ಪಿತ್ರಾರ್ಜಿತ ಆಸ್ತಿಯಲ್ಲಿ ನಿಮಗೆ ಸಮಪಾಲು ಸಿಗಲಿದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದತ್ತ ಹೆಚ್ಚಿನ ಗಮನ ನೀಡಲಿದ್ದಾರೆ. ಉದ್ಯೋಗಕ್ಕಾಗಿ ಅರಸುತ್ತಿರುವವರಿಗೆ ಶುಭ ಸುದ್ದಿ ಕಾದಿದೆ.

ವೃಶ್ಚಿಕ : ನಿಮ್ಮ ಉದಾಸೀನದ ಬುದ್ಧಿಯೇ ಕಚೇರಿಯಲ್ಲಿ ನಿಮ್ಮನ್ನ ಮೂಲೆಗುಂಪಾಗುವಂತೆ ಮಾಡಲಿದೆ. ಮೇಲಾಧಿಕಾರಿಗಳ ವಿಶ್ವಾಸ ಗಳಿಸಲು ಯತ್ನಿಸದ ಹೊರತು ಬಡ್ತಿ ಬಗ್ಗೆ ಆಸೆ ಇಟ್ಟುಕೊಳ್ಳಲೇಬೇಡಿ. ಸಂಗಾತಿಗೆ ಉತ್ತಮ ಉಡುಗೊರೆ ನೀಡಲಿದ್ದೀರಿ. ಗರ್ಭಿಣಿಯರು ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿ.

ಧನು : ಜವಳಿ ಉದ್ಯಮಿಗಳು ಇಂದು ಉತ್ತಮ ಲಾಭವನ್ನ ಹೊಂದಲಿದ್ದಾರೆ. ಕಲಾವಿದರು ಕೂಡ ಉತ್ತಮ ಸಂಪಾದನೆ ಮಾಡಲಿದ್ದಾರೆ. ಕುಟುಂಬಸ್ಥರ ನಡುವೆ ವೈಮನಸ್ಯ ಮೂಡುವ ಸಾಧ್ಯತೆ ಇದೆ. ಶಾಂತಿಯಲ್ಲಿ ಕೂತು ಮಾತನಾಡಿದಲ್ಲಿ ಮಾತ್ರ ಪರಿಸ್ಥಿತಿ ತಿಳಿಯಾಗಲಿದೆ.

ಮಕರ : ವೃತ್ತಿರಂಗದಲ್ಲಿ ಹೆಚ್ಚಿನ ಸ್ಪರ್ಧೆಯನ್ನು ಎದುರಿಸುತ್ತಿದ್ದೀರಿ. ಉದ್ಯಮದಲ್ಲಿ ಪಾಲುದಾರರ ಜೊತೆ ವೈಮನಸ್ಯ ಮೂಡುವ ಸಾಧ್ಯತೆ ಇದೆ. ಸರ್ಕಾರಿ ಉದ್ಯೋಗಿಗಳು ನೆಮ್ಮದಿಯಿಂದ ಕಚೇರಿ ಕೆಲಸ ಮಾಡಲಿದ್ದಾರೆ. ಬಹಳ ದಿನಗಳಿಂದ ವೈವಾಹಿಕ ಸಂಬಂಧಕ್ಕೆ ಹುಡುಕಾಟ ನಡೆಸುತ್ತಿರುವವರು ಇಂದು ಶುಭ ಸುದ್ದಿ ಕೇಳಲಿದ್ದೀರಿ.

ಕುಂಭ: ಧಾರ್ಮಿಕ ಬದುಕಿನತ್ತ ಒಲವು ಹೆಚ್ಚಿರೋದ್ರಿಂದ ಮನೆಯಲ್ಲಿ ಶೀಘ್ರದಲ್ಲೇ ಮಂಗಳಕಾರ್ಯವೊಂದು ನೆರವೇರಲಿದೆ. ವೈದ್ಯಕೀಯ ವೃತ್ತಿಯವರು ಒತ್ತಡದಲ್ಲಿ ಇರಲಿದ್ದಾರೆ. ಉದ್ಯಮದಲ್ಲಿ ಹೂಡಿಕೆ ಮಾಡುವವರಿಗೆ ಇದು ಶುಭ ದಿನ.

ಮೀನ : ಕಂಪನಿಯಲ್ಲಿ ಸಹೋದ್ಯೋಗಿಗಳ ಕಾಟದಿಂದ ಬೇಸತ್ತಿದ್ದೀರಾ. ಹೀಗಾಗಿ ಬದಲಾವಣೆಗಾಗಿ ಕಾಯುತ್ತಿದ್ದೀರಾ. ಆ ಸಮಯ ಕೂಡ ಶೀಘ್ರದಲ್ಲೇ ನಿಮ್ಮ ಕಣ್ಮುಂದೆ ಬರಲಿದೆ. ಶಿಕ್ಷಕ ವೃತ್ತಿಯವರು ನಿರಾಳವಾಗಿ ಕೆಲಸ ಮುಗಿಸಲಿದ್ದಾರೆ. ಮಕ್ಕಳಿಗೆ ವಿದ್ಯಾಭ್ಯಾಸದ ಯೋಗವಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...