alex Certify ಈ ರಾಶಿಯವರಿಗಿದೆ ಇಂದು ‘ಮಂಗಳ’ಕರ ದಿನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರಿಗಿದೆ ಇಂದು ‘ಮಂಗಳ’ಕರ ದಿನ

ಮೇಷ: ಕೋಪ ಯಾವ ಸಮಸ್ಯೆಯನ್ನೂ ಬಗೆಹರಿಸಲಾರದು. ಹೀಗಾಗಿ ತಾಳ್ಮೆಯನ್ನ ಬೆಳೆಸಿಕೊಳ್ಳಿ. ಕಚೇರಿಯಲ್ಲಿ ಎಂತಹ ಕಠಿಣ ಸಂದರ್ಭವನ್ನೂ ಎದುರಿಸುವ ಶಕ್ತಿ ನಿಮಗಿದೆ. ಹೊಸ ಉದ್ಯಮಕ್ಕೆ ಬಂಡವಾಳ ಹೂಡಬೇಕು ಎಂದುಕೊಂಡಿರುವ ನೀವು ಇಂದು ಮುಂದಿನ ಹೆಜ್ಜೆ ಇಡಬಹುದಾಗಿದೆ.

ವೃಷಭ : ಮನೆಗೆ ಬಂದ ಅತಿಥಿಗಳು ಅನವಶ್ಯಕ ಪ್ರಶ್ನೆ ಕೇಳಿ ನಿಮ್ಮ ತಾಳ್ಮೆ ಪರೀಕ್ಷೆ ಮಾಡಲಿದ್ದಾರೆ. ಆರ್ಥಿಕ ಪರಿಸ್ಥಿತಿ ಚೆನ್ನಾಗಿ ಇರಲಿದೆ. ಕಚೇರಿಯಲ್ಲಿ ನೆಮ್ಮದಿ ಕಾಯ್ದುಕೊಳ್ಳಲಿದ್ದೀರಿ. ಆಭರಣ ಖರೀದಿ ಮಾಡುವ ಸಾಧ್ಯತೆ ಇದೆ.

ಮಿಥುನ : ತಾಯಿಯು ಅನಾರೋಗ್ಯಕ್ಕೀಡಾಗೋದ್ರಿಂದ ನೀವು ಚಿಂತೆಗೆ ಒಳಗಾಗುತ್ತೀರಿ. ಆಸ್ತಿ ವಿಚಾರದಲ್ಲಿ ಸಹೋದರರ ನಡುವೆ ಸಂಘರ್ಷ ಉಂಟಾಗಲಿದೆ. ಪೋಷಕರ ಮಾರ್ಗದರ್ಶನದಂತೆ ಮುನ್ನಡೆಯಿರಿ. ಎಲ್ಲವೂ ಒಳಿತಾಗಲಿದೆ.

ಕಟಕ : ಕೋರ್ಟ್​ ಕೇಸುಗಳಲ್ಲಿ ನಿಮಗೆ ಮುನ್ನಡೆ ಉಂಟಾಗಲಿದೆ. ಧಾರ್ಮಿಕ ಕಾರ್ಯಗಳತ್ತ ಒಲವು ತೋರಲಿದ್ದೀರಿ, ರಾಜಕೀಯ ರಂಗದಲ್ಲಿ ಇರುವವರಿಗೆ ಉತ್ತಮ ಅವಕಾಶಗಳು ಹುಡುಕಿಕೊಂಡು ಬರಲಿದೆ.

ಸಿಂಹ: ಸರ್ಕಾರಿ ಉದ್ಯೋಗಿಗಳಿಗೆ ಕೊಂಚ ಕಿರಿಕಿರಿ ಉಂಟಾಗಲಿದೆ. ಸಾರ್ವಜನಿಕ ಸ್ಥಳದಲ್ಲಿ ಮನ್ನಣೆ ಗಳಿಸಲಿದ್ದೀರಿ. ಎಲೆಕ್ಟ್ರಾನಿಕ್​ ಉದ್ಯಮಿಗಳಿಗೆ ಲಾಭವಿದೆ. ಮನೆಯಲ್ಲಿ ಶುಭ ಕಾರ್ಯ ನಡೆಯುವ ಮುನ್ಸೂಚನೆ ಸಿಗಲಿದೆ.

ಕನ್ಯಾ : ಕಚೇರಿ ಕೆಲಸದ ನಿಮಿತ್ತ ದೂರ ಪ್ರಯಾಣ ಮಾಡಬೇಕಾಗಿ ಬರಬಹುದು. ನಿಮ್ಮ ಸಹೋದ್ಯೋಗಿಗಳೇ ನಿಮ್ಮ ವಿರುದ್ಧ ಪಿತೂರಿ ಮಾಡಬಹುದು. ಜಾಗರೂಕರಾಗಿರಿ. ವಿದ್ಯಾರ್ಥಿಗಳ ಕಠಿಣ ಪರಿಶ್ರಮಕ್ಕೆ ತಕ್ಕ ಬೆಲೆ ಸಿಗಲಿದೆ.

ತುಲಾ : ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ನೂರು ಬಾರಿ ಯೋಚನೆ ಮಾಡಿ. ಇಂದು ನೀವು ಬೆನ್ನು ನೋವಿನ ಸಮಸ್ಯೆಗೆ ಒಳಗಾಗುತ್ತೀರಿ. ವಿವಾಹ ಸಂಬಂಧಕ್ಕೆ ಹುಡುಕುತ್ತಿರುವವರಿಗೆ ಶುಭ ಸುದ್ದಿ ಕಾದಿದೆ. ವಿದ್ಯಾರ್ಥಿಗಳು ಪ್ರಯತ್ನ ಮುಂದುವರಿಸಿ.

ವೃಶ್ಚಿಕ : ನಿಮಗೆ ಸಹಾಯ ಮಾಡಲು ಮನಸಿಲ್ಲ ಎಂದ ಮಾತ್ರಕ್ಕೆ ಸಹಾಯ ಮಾಡಲು ಮುಂದಾಗುವವರ ಮನಸ್ಸನ್ನೂ ಹಾಳು ಮಾಡಬೇಡಿ. ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಿ. ದೇವರ ಅನುಗ್ರಹವಿದೆ.

ಧನು : ಇಂಜಿನಿಯರ್​​, ವೈದ್ಯಕೀಯ, ರಾಜಕೀಯ ರಂಗದವರಿಗೆ ಉತ್ತಮ ಅವಕಾಶವಿದೆ. ಶಿಕ್ಷಕ ವೃತ್ತಿಯವರಿಗೆ ಇಂದಿನ ದಿನ ಕಿರಿಕಿರಿ ಎನಿಸಲಿದೆ. ಆರೋಗ್ಯದ ಕಡೆಗೆ ಹೆಚ್ಚಿನ ಜಾಗೃತಿ ಅಗತ್ಯ. ಕುಲದೇವತೆಯನ್ನ ಪ್ರಾರ್ಥಿಸಿ.

ಮಕರ : ಶೀತ, ಜ್ವರದಂತಹ ಸಮಸ್ಯೆ ನಿಮ್ಮನ್ನು ಭಾದಿಸಬಹುದು. ಆತಂಕ ಬೇಡ. ಎಚ್ಚರಿಕೆ ಇರಲಿ. ಸಾಕಷ್ಟು ದಿನಗಳಿಂದ ನಿಮ್ಮನ್ನ ಕಾಡುತ್ತಿರುವ ಸಮಸ್ಯೆಗೆ ಇಂದು ಪರಿಹಾರ ಸಿಗಲಿದೆ. ಸಂಗಾತಿಯಿಂದ ಉತ್ತಮ ಸಲಹೆ ಪಡೆಯಲಿದ್ದೀರಿ.

ಕುಂಭ : ಹಣಕಾಸಿನ ಸ್ಥಿತಿ ಉತ್ತಮವಾಗಿ ಇರಲಿದೆ. ಕುಟುಂಬ ಸದಸ್ಯರ ಸಲಹೆಗೆ ಗಮನ ನೀಡಿ. ಬೆನ್ನು ನೋವಿನ ಸಮಸ್ಯೆಯಿಂದ ಬಳಲಲಿದ್ದೀರಿ. ಸಂಗಾತಿಯಿಂದ ಉತ್ತಮ ಉಡುಗೊರೆ ಪಡೆಯಲಿದ್ದೀರಿ. ದೇವರ ಧ್ಯಾನ ಮಾಡಿ.

ಮೀನ : ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶವಿದೆ. ಉದ್ಯೋಗಕ್ಕಾಗಿ ಅರಸುತ್ತಿರುವವರಿಗೆ ಉದ್ಯೋಗಾವಕಾಶ ಕೂಡಿ ಬರುವುದು. ಗರ್ಭಿಣಿಯರು ಆರೋಗ್ಯದ ಕಡೆ ಕಾಳಜಿ ವಹಿಸಿ. ಮೇಲಾಧಿಕಾರಿಗಳಿಂದ ಕೊಂಚ ಕಿರಿಕಿರಿ ಇದೆ. ಈಸಬೇಕು ಇದ್ದು ಜೈಸಬೇಕು ಎಂಬ ಮಾತಿನಲ್ಲಿ ವಿಶ್ವಾಸವನ್ನಿಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...