alex Certify ಕೆಲಸ ಶುರು ಮಾಡಿಲ್ಲ ಅಂದ್ರೆ ಬೈಕ್‌ ಮಾರೋದೊಂದೇ ಗತಿ ಎಂದ ಸೆಲೆಬ್ರಿಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಲಸ ಶುರು ಮಾಡಿಲ್ಲ ಅಂದ್ರೆ ಬೈಕ್‌ ಮಾರೋದೊಂದೇ ಗತಿ ಎಂದ ಸೆಲೆಬ್ರಿಟಿ

ಖ್ಯಾತ ಗಾಯಕ ಉದಿತ್​ ನಾರಾಯಣ್​ ಅವರ ಪುತ್ರ ಆದಿತ್ಯ ನಾರಾಯಣ್ ತಮ್ಮ ಗಾಯನದ ಮೂಲಕ ಸಂಗೀತ ಪ್ರಿಯರಿಗೆ ಚಿರಪರಿಚಿತರು. ಸಂಗೀತದ ಜೊತೆ ಜೊತೆಗೆ ನಿರೂಪಕರಾಗಿ, ಅನೇಕ ಶೋಗಳಲ್ಲಿ ಸ್ಪರ್ಧಿಯಾಗಿಯೂ ಜನಮನ ಗೆದ್ದಂತವರು. ಈ ಮಲ್ಟಿ ಟ್ಯಾಲೆಂಟೆಡ್​ ಸಿಂಗರ್​ ಈಗ ತಮ್ಮ ಆರ್ಥಿಕ ಸಂಕಷ್ಟವನ್ನ ಹೇಳಿಕೊಂಡಿದ್ದಾರೆ.

ಕೊರೊನಾ ವೈರಸ್​ , ಲಾಕ್​ಡೌನ್​ನಿಂದಾಗಿ ಅನೇಕರು ತಮ್ಮ ಜೇಬನ್ನ ಖಾಲಿ ಮಾಡಿಕೊಂಡಿದ್ದಾರೆ. ಈ ಸಾಲಿಗೆ ಗಾಯಕ ಆದಿತ್ಯ ನಾರಾಯಣ್​ ಕೂಡ ಸೇರಿದ್ದಾರೆ. ತಮ್ಮ ಆರ್ಥಿಕ ಸಂಕಷ್ಟವನ್ನ ಖುದ್ದು ಬಯಲು ಮಾಡಿರುವ ಆದಿತ್ಯ ನಾರಾಯಣ್​, ತಮ್ಮ ಬ್ಯಾಂಕ್​ ಖಾತೆಯಲ್ಲಿ ಕೇವಲ 18,000 ರೂ. ಉಳಿದುಕೊಂಡಿದೆ ಅಂತಾ ಹೇಳಿದ್ದಾರೆ.

ಆದಿತ್ಯ ನಾರಾಯಣ್​ 2020 ಆರಂಭವಾದ ಸಮಯದಲ್ಲಿ ತಾನು ಅರ್ಧ ವರ್ಷಗಳ ಕಾಲ ಕೆಲಸವೇ ಇಲ್ಲದೇ ಮನೆಯಲ್ಲಿ ಕೂರೋ ಸಂದರ್ಭ ಬರುತ್ತೆ ಅಂತಾ ಭಾವಿಸಿಯೇ ಇರಲಿಲ್ಲವಂತೆ. ಆದರೆ ಲಾಕ್​ಡೌನ್​ ಇವರ ಎಲ್ಲಾ ಪ್ಲಾನ್​ಗಳನ್ನ ಬುಡಮೇಲು ಮಾಡಿದೆ.

ಖಾಸಗಿ ಕಾರ್ಯಕ್ರಮವೊಂದರಲ್ಲಿ ಈ ವಿಚಾರವಾಗಿ ಮಾತನಾಡಿರುವ ಆದಿತ್ಯ ನಾರಾಯಣ್​, ಸರ್ಕಾರ ಏನಾದ್ರೂ ಲಾಕ್ ​ಡೌನ್​ನ್ನ ಮತ್ತೆ ಜಾರಿ ಮಾಡಿದ್ರೆ ಜನರು ಹಸಿವಿನಿಂದಲೇ ಸಾಯುತ್ತಾರೆ. ಈ ವರ್ಷ ಕೆಲಸವೇ ಸಿಗದ ಕಾರಣ ಮ್ಯೂಚುವಲ್​ ಫಂಡ್​ಗಳಲ್ಲಿ ಕೂಡಿಟ್ಟಿದ್ದ ಹಣವನ್ನೆಲ್ಲ ತೆಗೆದು ಖಾಲಿ ಮಾಡಿಬಿಟ್ಟಿದ್ದೇನೆ. ಸದ್ಯ ನನ್ನ ಖಾತೆಯಲ್ಲಿ ಕೇವಲ 18 ಸಾವಿರ ರೂಪಾಯಿ ಬಾಕಿ ಉಳಿದಿದೆ. ಅಕ್ಟೋಬರ್​ ತಿಂಗಳಲ್ಲೂ ನಾನು ಕೆಲಸ ಶುರು ಮಾಡಿಲ್ಲ ಅಂದರೆ ನನ್ನ ಬಳಿ ಹಣವೇ ಉಳಿಯಲ್ಲ. ನನ್ನ ಬೈಕ್ ಮಾರಿ ಹಣ ಸಂಪಾದಿಸೋ ದುರ್ಗತಿ ಬರಬಹುದು ಅಂತಾ ಬೇಸರ ಹೊರಹಾಕಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...