alex Certify ʼಹಾಲು-ತುಳಸಿʼ ಈ ರೀತಿ ಸೇವನೆ ಮಾಡಿದ್ರೆ ದೂರವಾಗುತ್ತೆ ರೋಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಹಾಲು-ತುಳಸಿʼ ಈ ರೀತಿ ಸೇವನೆ ಮಾಡಿದ್ರೆ ದೂರವಾಗುತ್ತೆ ರೋಗ

ಸಣ್ಣ ಸೀನು ಬಂದ್ರೂ ಮಾತ್ರೆ ತೆಗೆದುಕೊಳ್ಳುವ ಕಾಲ ಇದು. ಮಾತ್ರೆ ತಕ್ಷಣ ಆರಾಮ ನೀಡುತ್ತದೆ ನಿಜ. ಆದ್ರೆ ಅದ್ರಿಂದ ಸಾಕಷ್ಟು ಅಡ್ಡ ಪರಿಣಾಮಗಳಿವೆ. ನಮ್ಮ ಪೂರ್ವಜರು ಆಯುರ್ವೇದ ಹಾಗೂ ಮನೆ ಮದ್ದುಗಳಿಂದ ರೋಗಗಳನ್ನು ಗುಣಪಡಿಸಿಕೊಳ್ತಾ ಇದ್ದರು. ಇದರಿಂದ ಯಾವುದೇ ಅಡ್ಡ ಪರಿಣಾಮಗಳಾಗ್ತಾ ಇರಲಿಲ್ಲ.

ತುಳಸಿ ಗಿಡದ ಮಹತ್ವ ಎಲ್ಲರಿಗೂ ಗೊತ್ತು. ನೆಗಡಿ, ಜ್ವರ, ಕೆಮ್ಮಿಗೆ ತುಳಸಿಯನ್ನು ಬಳಸ್ತಾರೆ. ಸಾಕಷ್ಟು ಔಷಧಿ ಗುಣವಿರುವ ಈ ತುಳಸಿಯನ್ನು ಹಾಲಿನ ಜೊತೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ಬಹಳ ಒಳ್ಳೆಯದು. ಅನೇಕ ರೋಗಗಳಿಗೆ ಇದು ಮದ್ದಿನ ರೂಪದಲ್ಲಿ ಕೆಲಸ ಮಾಡುತ್ತದೆ.

ಕ್ಯಾನ್ಸರ್ ನಿಂದ ನಮ್ಮನ್ನು ರಕ್ಷಿಸುವ ಶಕ್ತಿ ಇದಕ್ಕಿದೆ. ಎಂಟಿಬಯೋಟಿಕ್ ಹಾಗೂ ಎಂಟಿಆಕ್ಸಿಡೆಂಟ್ ಗುಣ ತುಳಸಿಯಲ್ಲಿದೆ. ಹಾಲಿನಲ್ಲಿ ಪೋಷಕಾಂಶವಿದೆ. ಇದರಿಂದ ಪ್ರತಿರಕ್ಷಣಾ ಶಕ್ತಿ ಹೆಚ್ಚಾಗುತ್ತದೆ. ನಮ್ಮ ದೇಹ ಕ್ಯಾನ್ಸರ್ ನಂತ ರೋಗಗಳ ವಿರುದ್ಧ ಹೋರಾಡುವ ಶಕ್ತಿ ಪಡೆಯುತ್ತದೆ.

ಈಗಿನ ಕಾಲದಲ್ಲಿ ಒಂದಲ್ಲ ಒಂದು ಕಾರಣಕ್ಕೆ ಎಲ್ಲರೂ ಕೀಳರಿಮೆಗೆ ಗುರಿಯಾಗ್ತಿದ್ದಾರೆ. ಕೆಲವರು ಆತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೆ ಹೋಗ್ತಾರೆ. ನಿಮ್ಮಲ್ಲಿ ಅಥವಾ ನಿಮ್ಮ ಅಕ್ಕಪಕ್ಕದವರಲ್ಲಿ ಈ ಕೀಳರಿಮೆ ಕಾಣಿಸಿಕೊಂಡ್ರೆ ಹಾಲಿನ ಜೊತೆ ತುಳಸಿ ಹಾಕಿ ಕುಡಿಯಿರಿ. ಇದು ನರಮಂಡಲವನ್ನು ಸಮತೋಲನದಲ್ಲಿಡುತ್ತದೆ. ಒತ್ತಡವನ್ನುಂಟು ಮಾಡುವ ಹಾರ್ಮೋನ್ ಗಳನ್ನು ನಿಯಂತ್ರಿಸುತ್ತದೆ. ಜೊತೆಗೆ ಆಗಾಗ ಕಾಣಿಸಿಕೊಳ್ಳುವ ತಲೆನೋವನ್ನು ದೂರ ಮಾಡುತ್ತದೆ.

ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ತುಳಸಿ ಹಾಲು ಸೇವನೆ ಮಾಡುವುದರಿಂದ ಅಸ್ತಮಾದಂತ ಖಾಯಿಲೆಗಳು ದೂರವಾಗುತ್ತವೆ.

ಕಿಡ್ನಿಯಲ್ಲಿ ಕಲ್ಲು ಬೆಳೆಯುತ್ತಿದ್ದರೆ ಖಾಲಿ ಹೊಟ್ಟೆಯಲ್ಲಿ ತುಳಸಿ ಹಾಲನ್ನು ಕುಡಿಯಿರಿ. ಕೆಲವೇ ದಿನಗಳಲ್ಲಿ ಕಲ್ಲು ಕರಗುತ್ತದೆ.

ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿರುವವರು ಖಾಲಿ ಹೊಟ್ಟೆಯಲ್ಲಿ ಇದನ್ನು ಕುಡಿಯುತ್ತ ಬಂದರೆ ಕೆಲವೇ ದಿನಗಳಲ್ಲಿ ಪರಿಣಾಮ ಕಾಣಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...