alex Certify ವಿರಾಟ್​ ಕೊಹ್ಲಿಗೆ ಹರಿದುಬರುತ್ತಿದೆ ಬೆಂಬಲದ ಮಹಾಪೂರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿರಾಟ್​ ಕೊಹ್ಲಿಗೆ ಹರಿದುಬರುತ್ತಿದೆ ಬೆಂಬಲದ ಮಹಾಪೂರ

ಈ ಬಾರಿಯ ಐಪಿಎಲ್​ನಿಂದ ರಾಯಲ್​ ಚಾಲೆಂಜರ್ಸ್ ಬೆಂಗಳೂರು ಹೊರಬಿದ್ದ ಬಳಿಕ ವಿರಾಟ್​ ಕೊಹ್ಲಿ ನಾಯಕತ್ವದ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿ ಬರ್ತಿವೆ. ಆದರೆ ಆರ್​ಸಿಬಿ ಸಿಬ್ಬಂದಿ ಮುಖ್ಯಸ್ಥರಾದ ಮೈಕ್​ ಹೆಸ್ಸನ್​ ಹಾಗೂ ಸೈಮನ್​ ಕ್ಯಾಟಿಚ್​ ಕೊಹ್ಲಿ ಪರ ಬ್ಯಾಟ್​ ಬೀಸಿದ್ದಾರೆ.

ಆರ್​ಸಿಬಿ ತನ್ನ ಕಳಪೆ ಬ್ಯಾಟಿಂಗ್​ನಿಂದಾಗಿ ಸನ್‌ ​ರೈಸರ್ಸ್ ಹೈದರಾಬಾದ್​ ವಿರುದ್ಧ ಸೋತು ಶರಣಾಗಿದೆ. ಇದಾದ ಬಳಿಕ ಮಾಜಿ ಕ್ರಿಕೆಟಿಗ ಗೌತಮ್​ ಗಂಭೀರ್,​​ ಕೊಹ್ಲಿಯನ್ನ ನಾಯಕನನ್ನ ತೆಗೆದುಹಾಕುವಂತೆ ಕರೆ ನೀಡಿದ್ದಾರೆ.

ವಿರಾಟ್​ ಕೊಹ್ಲಿಯನ್ನ ನಾಯಕರನ್ನಾಗಿ ಪಡೆದಿರೋದು ನಮ್ಮ ಅದೃಷ್ಟ. ಅವರು ವೃತ್ತಿಪರರು ಹಾಗೂ ತಂಡವನ್ನ ಚೆನ್ನಾಗಿ ಮುನ್ನಡೆಸಿದ್ದಾರೆ. ಅಲ್ಲದೇ ಪಡಿಕಲ್​ರಂತಹ ಯುವ ಆಟಗಾರರಿಗೆ ಉತ್ತಮ ಮಾರ್ಗದರ್ಶಕರಾಗಿದ್ದರು ಅಂತಾ ಕ್ಯಾಟಿಚ್​ ಹೇಳಿದ್ದಾರೆ.

ಮೈಕ್​ ಹೆಸ್ಸನ್​ ಕೂಡ ವಿರಾಟ್​ ರಂತಹ ಇನ್ನೊಬ್ಬ ನಾಯಕ ತಂಡಕ್ಕೆ ಸಿಗಲಿಕ್ಕಿಲ್ಲ ಅಂತಾ ಅಭಿಪ್ರಾಯಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...