alex Certify ಹೊಲದಲ್ಲೇ ಪ್ರಿಯಕರನ ಜೊತೆಯಾಗಿದ್ದಾಗಲೇ ಸಿಕ್ಕಿಬಿದ್ದ ಪತ್ನಿ: ಕೆಂಡಾಮಂಡಲನಾದ ಗಂಡನಿಂದ ಇಬ್ಬರ ಬರ್ಬರ ಹತ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಲದಲ್ಲೇ ಪ್ರಿಯಕರನ ಜೊತೆಯಾಗಿದ್ದಾಗಲೇ ಸಿಕ್ಕಿಬಿದ್ದ ಪತ್ನಿ: ಕೆಂಡಾಮಂಡಲನಾದ ಗಂಡನಿಂದ ಇಬ್ಬರ ಬರ್ಬರ ಹತ್ಯೆ

ಯಾದಗಿರಿ: ಕಾಚಾಪುರದಲ್ಲಿ ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಜೋಡಿ ಕೊಲೆ ಮಾಡಲಾಗಿದೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕಾಚಾಪುರದಲ್ಲಿ ಘಟನೆ ನಡೆದಿದೆ.

ಪತಿ ಮಲ್ಲಣ್ಣನಿಂದ ಪತ್ನಿ ಬಸಮ್ಮ ಮತ್ತು ನಾಡಗೌಡ ಅವರನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಕಲ್ಲು ಎತ್ತಿ ಹಾಕಿ ಬಳಿಕ ಕುಡುಗೋಲಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಹೊಲದಲ್ಲಿ ಪತಿಯ ಕೈಗೆ ಬಸಮ್ಮ ಮತ್ತು ಪ್ರಿಯಕರ ನಾಡಗೌಡ ಸಿಕ್ಕಿ ಬಿದ್ದಿದ್ದರು. ಆರೋಪಿ ಮಲ್ಲಣ್ಣನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಕೆಂಭಾವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...