alex Certify ಇಮ್ಯುನಿಟಿ ಬೂಸ್ಟರ್ ಸೇವಿಸಿದ್ದ 8 ಕಾರ್ಮಿಕರು ಅಸ್ವಸ್ಥ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಮ್ಯುನಿಟಿ ಬೂಸ್ಟರ್ ಸೇವಿಸಿದ್ದ 8 ಕಾರ್ಮಿಕರು ಅಸ್ವಸ್ಥ

ಚಿತ್ರದುರ್ಗ: ಇಮ್ಯುನಿಟಿ  ಬೂಸ್ಟರ್ ಸೇವಿಸಿದ್ದ 8 ಜನ ಕಾರ್ಮಿಕರು ಅಸ್ವಸ್ಥರಾಗಿ ಆಸ್ಪತ್ರೆಗೆ ಸೇರಿದ್ದಾರೆ. ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಾದ ಕಾರ್ಮಿಕರಿಗೆ ಚಿಕಿತ್ಸೆ ನೀಡಲಾಗಿದ್ದು, ವೈದ್ಯಕೀಯ ವರದಿ ಬಳಿಕ ಮುಂದಿನ ಕ್ರಮಕೈಗೊಳ್ಳಲಾಗುವುದು ಎನ್ನಲಾಗಿದೆ.

ಕಾರ್ಮಿಕ ಇಲಾಖೆಯಿಂದ ಗುರುತಿನ ಚೀಟಿ ಹೊಂದಿದ ಕಾರ್ಮಿಕರಿಗೆ ಇಮ್ಯುನಿಟಿ ಬೂಸ್ಟರ್ ಕೊಡಲಾಗಿದೆ. ಇದನ್ನು ತೆಗೆದುಕೊಂಡ ಕೆಲವು ಕಾರ್ಮಿಕರಿಗೆ ವಾಂತಿ, ಭೇದಿ ಶುರುವಾಗಿದೆ. ಗಿಡಮೂಲಿಕೆಯ ಪುಡಿಯಂತೆ ಕಾಣಿಸುವ ಈ ಬೂಸ್ಟರ್ ನಲ್ಲಿ ಕಡ್ಡಿ, ಧೂಳು, ಪ್ಲಾಸ್ಟಿಕ್ ದಾರ ಇದ್ದವು ಎಂದು ಕಾರ್ಮಿಕರು ಹೇಳಿದ್ದಾರೆ.

ಸುಮಾರು 800 ಕಾರ್ಮಿಕರಿಗೆ ಬೂಸ್ಟರ್ ನೀಡಲಾಗಿದೆ. ರಾಜ್ಯದ ಹಲವೆಡೆಯೂ ಬೂಸ್ಟರ್ ನೀಡಲಾಗಿದ್ದು, ಕಾರ್ಮಿಕ ಇಲಾಖೆಯಿಂದ ಪರಿಶೀಲನೆ ಬಳಿಕ ಮುಂದಿನ ಕ್ರಮಕೈಗೊಳ್ಳಲಾಗುವುದು ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...