alex Certify ಅಚ್ಚರಿಯಾದ್ರೂ ಇದು ಸತ್ಯ…! ಪೂರ್ವಜರ ಆತ್ಮಕ್ಕೆ ಶಾಂತಿ‌ ಸಿಗಲು ಬೆರಳು ಕತ್ತರಿಸಿಕೊಳ್ಳುವ ಮಹಿಳೆಯರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಚ್ಚರಿಯಾದ್ರೂ ಇದು ಸತ್ಯ…! ಪೂರ್ವಜರ ಆತ್ಮಕ್ಕೆ ಶಾಂತಿ‌ ಸಿಗಲು ಬೆರಳು ಕತ್ತರಿಸಿಕೊಳ್ಳುವ ಮಹಿಳೆಯರು

ಜಗತ್ತಿನಲ್ಲಿ ನಮಗೆ ತಿಳಿದಿಲ್ಲದ ಅನೇಕ ಸಾಂಸ್ಕೃತಿಕ ಸಂಪ್ರದಾಯ ಮತ್ತು ಆಚರಣೆಗಳು ಅಸ್ತಿತ್ವದಲ್ಲಿವೆ. ಇಂಡೋನೇಷ್ಯಾದ ಒಂದು ಬುಡಕಟ್ಟು ಜನರು ಅನುಸರಿಸುವ ಕೆಲವು ಆಚರಣೆಗಳು ತುಂಬಾ ವಿಲಕ್ಷಣವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.

ಇಂಡೋನೇಷ್ಯಾದ ಕೆಲವು ಭಾಗಗಳಲ್ಲಿ ಡ್ಯಾನಿ ಬುಡಕಟ್ಟು ಜನಾಂಗದವರು ಅನುಸರಿಸುತ್ತಿರುವ ವಿಚಿತ್ರ ಸಂಪ್ರದಾಯದಂತೆ ಕುಟುಂಬದ ಸದಸ್ಯರ ಸಾವಿನ ಬಳಿಕ ಮಹಿಳೆಯರು ತಮ್ಮ ಬೆರಳುಗಳನ್ನು ಕತ್ತರಿಸಿಕೊಳ್ಳುತ್ತಾರೆ.

ಇಕಿಪಾಲಿನ್​ ಒಂದು ಆಚರಣೆಯಾಗಿದ್ದು, ಕುಟುಂಬದ ಪ್ರೀತಿಯ ಸದಸ್ಯರ ಮರಣದ ನಂತರ, ಮನೆಯ ಮಹಿಳೆಯರು ತಮ್ಮ ಬೆರಳಿನ ಮೇಲಿನ ಭಾಗವನ್ನು ಕತ್ತರಿಸಬೇಕಾಗುತ್ತದೆ. ಅಂಗಚ್ಛೇದನ ಪೂರ್ಣಗೊಂಡ ನಂತರ, ಅವರ ಪೂರ್ವಜರ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದು ನಂಬಲಾಗಿದೆ.

ಇಂಡೋನೇಷ್ಯಾ ಸರ್ಕಾರವು ದ್ವೀಪ ಸಮೂಹದಲ್ಲಿ ಈ ಅಭ್ಯಾಸವನ್ನು ನಿಷೇಧಿಸಿದ್ದರೂ, ಜಯವಿಜಯ ಪ್ರಾಂತ್ಯದಲ್ಲಿ ವಾಸಿಸುವ ಡ್ಯಾನಿ ಬುಡಕಟ್ಟಿನವರು ಇಕಿಪಾಲಿನ್​ ಎಂದು ಕರೆಯಲ್ಪಡುವ ಈ ವಿಶಿಷ್ಟ ಪದ್ಧತಿಯನ್ನು ಪಾಲಿಸುತ್ತಿದ್ದಾರೆ.

ಮೊದಲು ರಕ್ತ ಚಲನೆಯನ್ನು ತಡೆಯಲು ಮಹಿಳೆಯ ಬೆರಳನ್ನು ಹಗ್ಗದಿಂದ ಸುರಕ್ಷಿತವಾಗಿ ಕಟ್ಟುವ ಮೂಲಕ ಕಾರ್ಯಗತಗೊಳಿಸಲಾಗುತ್ತದೆ. ಸ್ವಲ್ಪ ಸಮಯದ ನಂತರ, ಅದನ್ನು ಕತ್ತರಿಸಲು ಕೊಡಲಿಯನ್ನು ಬಳಸಲಾಗುತ್ತದೆ. ಕಾರ್ಯವಿಧಾನವು ಪೂರ್ಣಗೊಂಡ ನಂತರ, ರಕ್ತಸ್ರಾವವನ್ನು ನಿಲ್ಲಿಸಲು ಬೆರಳ ತುದಿಗಳನ್ನು ಸುಡಲಾಗುತ್ತದೆ.

ಒಬ್ಬರ ಬೆರಳನ್ನು ಕತ್ತರಿಸುವುದು ಕುಟುಂಬದ ಸದಸ್ಯರ ಸಾವಿನಿಂದ ಉಂಟಾಗುವ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಡ್ಯಾನಿ ಬುಡಕಟ್ಟಿನವರು ಭಾವಿಸುತ್ತಾರೆ.

ಈ ನೋವಿನ ಆಚರಣೆ ನಿಷೇಧಿಸಲು ಸರ್ಕಾರ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದೆ. ಭಯಾನಕ ಸಂಪ್ರದಾಯವನ್ನು ಖಂಡಿಸಿ ಮತ್ತು ಮಹಿಳೆಯರ ಮೇಲೆ ಮಾತ್ರ ಇಂತಹ ನೋವಿನ ಸಂಪ್ರದಾಯಗಳನ್ನು ಏಕೆ ವಿಧಿಸಲಾಗಿದೆ ಎಂದು ಪ್ರಶ್ನಿಸಿ ಹಲವಾರು ಪ್ರತಿಭಟನೆಗಳು ನಡೆದಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...