alex Certify ʼರಾಮಾಯಣʼ ಎಕ್ಸ್​ಪ್ರೆಸ್​​​ ವೇಟರ್​​ಗಳಿಗೆ ಕೇಸರಿ ಬಣ್ಣದ ಡ್ರೆಸ್ ​ಕೋಡ್​​..! ಪ್ರತಿಭಟನೆಯ ಎಚ್ಚರಿಕೆ ನೀಡಿದ ಸ್ವಾಮೀಜಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼರಾಮಾಯಣʼ ಎಕ್ಸ್​ಪ್ರೆಸ್​​​ ವೇಟರ್​​ಗಳಿಗೆ ಕೇಸರಿ ಬಣ್ಣದ ಡ್ರೆಸ್ ​ಕೋಡ್​​..! ಪ್ರತಿಭಟನೆಯ ಎಚ್ಚರಿಕೆ ನೀಡಿದ ಸ್ವಾಮೀಜಿ

ರಾಮಾಯಣ ಎಕ್ಸ್​​ಪ್ರೆಸ್​ನಲ್ಲಿ ವೇಟರ್​ಗಳಿಗೆ ಕೇಸರಿ ಉಡುಗೆಯನ್ನು ನೀಡಿದ್ದಕ್ಕೆ ಮಧ್ಯ ಪ್ರದೇಶದ ಉಜ್ಜಯಿನಿಯ ಶ್ರೀಗಳು ಇದು ಹಿಂದೂ ಧರ್ಮಕ್ಕೆ ಮಾಡಿದ ಅವಮಾನ ಎಂದು ಕಿಡಿಕಾರಿದ್ದಾರೆ. ಅಲ್ಲದೇ ವೇಟರ್​ಗಳಿಗೆ ನೀಡಲಾದ ಈ ಡ್ರೆಸ್​ಕೋಡ್​​ ಹಿಂಪಡೆಯದೇ ಇದ್ದರೆ ಡಿಸೆಂಬರ್​ 12ರಂದು ದೆಹಲಿಯಲ್ಲಿ ರೈಲು ನಿಲ್ಲಿಸುವುದಾಗಿ ಬೆದರಿಕೆ ಹಾಕಿದ್ದಾರೆ.

ರಾಮಾಯಣ ಎಕ್ಸ್​​ಪ್ರೆಸ್​ನಲ್ಲಿ ಕೇಸರಿ ಬಣ್ಣದ ಬಟ್ಟೆ ಧರಿಸಿದ ವೇಟರ್​ಗಳು ಆಹಾರಗಳನ್ನು ಪ್ರಯಾಣಿಕರಿಗೆ ಬಡಿಸುತ್ತಿರುವ ಬಗ್ಗೆ ಕೇಂದ್ರ ರೈಲ್ವೆ ಸಚಿವರಿಗೆ ಪತ್ರ ಬರೆದಿದ್ದೇವೆ. ವೇಟರ್​ಗಳು ಸಾಧುಗಳಂತೆ ಕೇಸರಿ ಬಣ್ಣದ ಬಟ್ಟೆ, ಹಾರ ಹಾಗೂ ರುದ್ರಾಕ್ಷಿ ಮಾಲೆಗಳನ್ನು ಧರಿಸಿದ್ದಾರೆ. ಇದು ಹಿಂದೂ ಧರ್ಮ ಹಾಗೂ ಶ್ರೀಗಳಿಗೆ ಮಾಡಿದ ಅವಮಾನವಾಗಿದೆ ಎಂದು ಉಜ್ಜಯಿನಿ ಅಖಂಡ ಪರಿಷತ್​​ನ ಮಾಜಿ ಪ್ರಧಾನ ಕಾರ್ಯದರ್ಶಿ ಅವದೇಶಪುರಿ ಹೇಳಿದ್ರು.

ವೇಟರ್​ಗಳ ಡ್ರೆಸ್​ ಕೋಡ್​ನ್ನು ಬದಲಾಯಿಸದೇ ಹೋದಲ್ಲಿ ತಾವು ದೆಹಲಿಯ ಸಫ್ದರ್​ಗಂಜ್​​ ರೈಲು ನಿಲ್ದಾಣದಲ್ಲಿ ರೈಲು ನಿಲ್ಲಿಸೋದಾಗಿ ಹೇಳಿದ್ರು.

ನಾವು ರೈಲ್ವೆ ಹಳಿಗಳ ಮೇಲೆ ಕೂರುತ್ತೇವೆ. ಹಿಂದೂ ಧರ್ಮದ ಉಳಿವಿಗಾಗಿ ಈ ಹೋರಾಟ ಅನಿವಾರ್ಯವಾಗಿದೆ. ಈ ವಿಚಾರವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...