alex Certify ಶುಭ ಕಾರ್ಯಗಳಲ್ಲಿ ಮಾವಿನ ಎಲೆಗಳನ್ನು ಬಳಸುವುದೇಕೆ….? ಇದರಲ್ಲಿದೆ ಅನೇಕ ಸಮಸ್ಯೆಗಳಿಗೆ ಪರಿಹಾರ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶುಭ ಕಾರ್ಯಗಳಲ್ಲಿ ಮಾವಿನ ಎಲೆಗಳನ್ನು ಬಳಸುವುದೇಕೆ….? ಇದರಲ್ಲಿದೆ ಅನೇಕ ಸಮಸ್ಯೆಗಳಿಗೆ ಪರಿಹಾರ…..!

ಮಾವಿನ ಎಲೆಗಳನ್ನು ಹಿಂದೂ ಧರ್ಮದಲ್ಲಿ ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಪೂಜೆ ಮತ್ತು ಶುಭ ಕಾರ್ಯಗಳಲ್ಲಿ ಮಾವಿನ ಎಲೆ ಇರಲೇಬೇಕು. ಅವುಗಳಿಲ್ಲದೆ ಯಾವುದೇ ಶುಭ ಕಾರ್ಯವನ್ನು ಅಪೂರ್ಣವೆಂದು ಪರಿಗಣಿಸಲಾಗುತ್ತದೆ. ವಾಸ್ತವವಾಗಿ ಶುಭ ಕಾರ್ಯಗಳಿಗೆ ಮಾವಿನ ಎಲೆಗಳನ್ನು ಬಳಸುವುದರ ಹಿಂದೆ ಅನೇಕ ಸಕಾರಾತ್ಮಕ ಕಾರಣಗಳಿವೆ. ಇದರಿಂದ ಅನೇಕ ವಿಧಗಳಲ್ಲಿ ಪ್ರಯೋಜನಗಳನ್ನು ಪಡೆಯಬಹುದು.

ಮಾವಿನ ಎಲೆಗಳ ಪ್ರಯೋಜನಗಳು

ಮನೆಯ ಪ್ರವೇಶ ದ್ವಾರದಲ್ಲಿ ಮಾವಿನ ಎಲೆಗಳನ್ನು ಇಟ್ಟರೆ ಅದು ಧನಾತ್ಮಕ ಶಕ್ತಿಯನ್ನು ಮನೆಗೆ ತರುತ್ತದೆ. ಮಾವಿನ ಎಲೆಗಳನ್ನು ಮುಖ್ಯ ದ್ವಾರದಲ್ಲಿ ಇಡುವುದರಿಂದ ಎಲ್ಲಾ ರೀತಿಯ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಮನೆಯಲ್ಲಿ ಸಂತೋಷ ಮತ್ತು ಶಾಂತಿಯ ವಾತಾವರಣವನ್ನು ಸೃಷ್ಟಿಸುತ್ತದೆ. ಮಾವಿನ ಎಲೆಗಳನ್ನು ದೇವಸ್ಥಾನದಲ್ಲಿ ಗಣೇಶನ ಬಳಿ ಇಟ್ಟರೆ ಹಣದ ಕೊರತೆ ಇರುವುದಿಲ್ಲ.

ಆರ್ಥಿಕ ಬಿಕ್ಕಟ್ಟನ್ನು ನಿವಾರಿಸುವ ಮಾರ್ಗಗಳು

ಒಬ್ಬ ವ್ಯಕ್ತಿಯು ದೀರ್ಘಕಾಲದಿಂದ ಸಾಲದಲ್ಲಿದ್ದರೆ ಅಥವಾ ಯಾವುದೇ ರೀತಿಯ ಆರ್ಥಿಕ ಬಿಕ್ಕಟ್ಟಿನಿಂದ ತೊಂದರೆಗೊಳಗಾಗಿದ್ದರೆ  ಖಂಡಿತವಾಗಿಯೂ ಮಾವಿನ ಎಲೆಗಳ ಈ ಪರಿಹಾರವನ್ನು ಅಳವಡಿಸಿಕೊಳ್ಳಬೇಕು. ಇದಕ್ಕಾಗಿ, 11 ಮಾವಿನ ಎಲೆಗಳನ್ನು ತೆಗೆದುಕೊಂಡು ಅವುಗಳನ್ನು ಹಸಿ ಹತ್ತಿಯಲ್ಲಿ ಕಟ್ಟಿ ನಂತರ ಅದನ್ನು ಜೇನುತುಪ್ಪದಲ್ಲಿ ಅದ್ದಿ. ಈ ಎಲೆಗಳನ್ನು ಶಿವಲಿಂಗದ ಅಶೋಕ ಸುಂದರಿಯ ಮೇಲೆ ಅರ್ಪಿಸಿ.

ಆರ್ಥಿಕ ಲಾಭ

ಪೂಜೆಯ ಸಮಯದಲ್ಲಿ ಇಡೀ ಮನೆಯಲ್ಲಿ ಮಾವಿನ ಎಲೆಗಳ ನೀರನ್ನು ಸಿಂಪಡಿಸಿ. ಇದನ್ನು ಮಾಡುವುದರಿಂದ ಆರ್ಥಿಕ ಲಾಭವನ್ನು ಪಡೆಯುವ ಎಲ್ಲಾ ಸಾಧ್ಯತೆಗಳಿವೆ.

ವೃತ್ತಿ ಸಮಸ್ಯೆಗಳನ್ನು ನಿವಾರಣೆ…

ವೃತ್ತಿ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಪ್ರತಿದಿನ ಬೆಳಗ್ಗೆ ಸ್ನಾನದ ನಂತರ ಮಾವಿನ ಮರಕ್ಕೆ ನೀರನ್ನು ಅರ್ಪಿಸಿ. ಹೀಗೆ ಮಾಡುವುದರಿಂದ ವೃತ್ತಿಯಲ್ಲಿ ಯಶಸ್ಸು ಸಿಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...