alex Certify ಅಲ್ಲು ಅರ್ಜುನ್‌ರಿಂದ ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿದ್ದ ನಯನತಾರಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಲ್ಲು ಅರ್ಜುನ್‌ರಿಂದ ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿದ್ದ ನಯನತಾರಾ

ತಮ್ಮ ಸ್ಟೈಲ್ ಹಾಗೂ ಚಾರ್ಮ್‌ನಿಂದ ಬರೀ ತೆಲುಗು ರಾಜ್ಯಗಳಲ್ಲಿ ಮಾತ್ರವಲ್ಲದೇ ಇಡೀ ದೇಶದಲ್ಲೇ ಅಭಿಮಾನಿಗಳನ್ನು ಹೊಂದಿರುವ ಟಾಲಿವುಡ್ ನಟ ಅಲ್ಲು ಅರ್ಜುನ್ ಬಹಳಷ್ಟು ಬಾರಿ ತಮ್ಮ ವಿನಯವಂತಿಕೆಯಿಂದಲೂ ಮಂದಿಯ ಮನ ಗೆಲ್ಲುತ್ತಾರೆ.

2016ರ ಸೈಮಾ ಪ್ರಶಸ್ತಿಗಳ ಪ್ರದಾನ ಸಮಾರಂಭದ ವೇಳೆ ನಡೆದಿದ್ದ ಘಟನೆಯೊಂದು ಈಗ ಮತ್ತೆ ಸದ್ದು ಮಾಡಿದೆ. ಆ ವರ್ಷ ’ನಾನುಂ ರೌಡಿ’ ಚಿತ್ರದಲ್ಲಿ ಅಭಿನಯಕ್ಕಾಗಿ ’ಅತ್ಯುತಮ ನಟಿ’ ಗೌರವಕ್ಕೆ ಭಾಜನರಾದ ನಯನತಾರಾಗೆ ಪ್ರಶಸ್ತಿ ನೀಡಲು ಅಲ್ಲು ಅರ್ಜುನ್‌ರನ್ನು ವೇದಿಕೆಗೆ ಆಹ್ವಾನಿಸಲಾಗಿತ್ತು.

ಅಮ್ಮನ ಮಡಿಲಲ್ಲಿ ಮಲಗಿರುವ ಸೆಲ್ಫಿ ಶೇರ್‌ ಮಾಡಿದ ಸಲ್ಮಾನ್ ಖಾನ್

ಆ ವೇಳೆ ವೇದಿಕೆ ಮೇಲೆ ಬಂದು ಮೈಕ್ ಹಿಡಿದ ಬಳಿಕ ಮಾತನಾಡಿದ ನಯನತಾರಾ, ತಮ್ಮ ಜೀವನದಲ್ಲಿ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದ ತಿಳಿಸಿ, ತಾವು ಆ ಪ್ರಶಸ್ತಿಯನ್ನು ನಿರ್ದೇಶಕ ವಿಘ್ನೇಶ್ ಶಿವನ್‌ರಿಂದ ಸ್ವೀಕರಿಸಲು ಇಚ್ಛಿಸುವುದಾಗಿ ಹೇಳಿದ್ದರು.

ಇದಕ್ಕೆ ಅಲ್ಲು ಅರ್ಜುನ್ ಸಂತಸದಿಂದಲೇ ಒಪ್ಪಿದರೂ ಸಹ ಅವರ ಅಭಿಮಾನಿಗಳಿಂದ ನಯನತಾರಾ ಮೇಲೆ ಭಾರೀ ಸಿಟ್ಟಿನ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಆಕೆಯ ಮೇಲೆ ವಾಗ್ದಾಳಿಗಳು ಜೋರಾಗಿದ್ದವು.

ಕಡೇ ಪಕ್ಷ ನಯನತಾರಾ ಅಲ್ಲುರತ್ತ ನಯವಾಗಿ ಮಾತನಾಡಬಹುದಿತ್ತು ಎಂದು ನೆಟ್ಟಿಗರೊಬ್ಬರು ತಿಳಿಸಿದ್ದಾರೆ. ಅ ವೇಳೆ ನಯನತಾರಾ ಪ್ರಬುದ್ಧತೆಯಿಂದ ವರ್ತಿಸಬೇಕಿತ್ತು ಎಂದು ಕೆಲವರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...