alex Certify ಪತ್ನಿ ವಿರುದ್ಧವೇ ದೂರು ದಾಖಲಿಸಿದ್ದರು ನಟ ಅಕ್ಷಯ್​ ಕುಮಾರ್​ : ಇಲ್ಲಿದೆ ಪ್ರಕರಣದ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿ ವಿರುದ್ಧವೇ ದೂರು ದಾಖಲಿಸಿದ್ದರು ನಟ ಅಕ್ಷಯ್​ ಕುಮಾರ್​ : ಇಲ್ಲಿದೆ ಪ್ರಕರಣದ ವಿವರ

ಬಾಲಿವುಡ್​ನ ಎವರ್​ಗ್ರೀನ್​ ಜೋಡಿಗಳಲ್ಲಿ ಅಕ್ಷಯ್​ ಕುಮಾರ್​ ಹಾಗೂ ಟ್ವಿಂಕಲ್​​ ಖನ್ನಾ ಕೂಡ ಒಬ್ಬರು. ಇಬ್ಬರ ಆಫ್​ಸ್ಕ್ರೀನ್​ ಕೆಮಿಸ್ಟ್ರಿಯನ್ನು ಅನೇಕರು ಇಷ್ಟಪಡುತ್ತಾರೆ. ಇಬ್ಬರೂ ತಮ್ಮ ಹಾಸ್ಯದ ಮೂಲಕವೇ ಸಂದರ್ಶನಗಳಲ್ಲಿ ಗಮನ ಸೆಳೆದರೂ ಸಹ ಹಿಂದೊಮ್ಮೆ ರ್ಯಾಂಪ್​ ವಾಕ್​ ಮಾಡುವ ಸಂದರ್ಭದಲ್ಲಿ ಮೋಜಿಗಾಗಿ ಏನನ್ನೋ ಮಾಡಲು ಹೋಗಿ ವಿವಾದಕ್ಕೆ ಸಿಲುಕಿದ್ದರು.

ಲ್ಯಾಕ್ಮೆ ಫ್ಯಾಶನ್​ ವೀಕ್​​ನಲ್ಲಿ ರ್ಯಾಂಪ್​ ವಾಕ್​ ಮಾಡುತ್ತಿದ್ದ ಸಂದರ್ಭದಲ್ಲಿ ಅಕ್ಷಯ್,​ ಟ್ವಿಂಕಲ್​ ಕಡೆ ತಿರುಗಿ ತಮ್ಮ ಪ್ಯಾಂಟ್​ನ ಝಿಪ್​ ತೆಗೆಯುವಂತೆ ಹೇಳಿದ್ದರು. ಟ್ವಿಂಕಲ್​​ ಖನ್ನಾ ಮೊದಲು ಇದನ್ನು ಮಾಡಲು ಹಿಂಜರಿದರೂ ಸಹ ಬಳಿಕ ಝಿಪ್​ ತೆರೆದಿದ್ದರು. ಒಂದು ವೇಳೆ ಟ್ವಿಂಕಲ್​ ಖನ್ನಾ ಅಂದು ಪತಿಯ ಮಾತನ್ನು ಕೇಳದೇ ಹೋಗಿದ್ದರೆ ಅವರು ಅಷ್ಟು ದೊಡ್ಡ ವಿವಾದದಲ್ಲಿ ಸಿಲುಕುತ್ತಲೇ ಇರಲಿಲ್ಲ.

ಅಕ್ಷಯ್​ ಕುಮಾರ್​ ಬೆಲ್ಟ್​​ ತೆಗೆದ ಟ್ವಿಂಕಲ್​ ಖನ್ನಾ, ಬಳಿಕ ಅಕ್ಷಯ್​ ಕುಮಾರ್​ ಜೀನ್ಸ್​ ಪ್ಯಾಂಟ್​ ಬಿಚ್ಚಿದ್ದರು. ಅಲ್ಲಿದ್ದ ಪ್ರೇಕ್ಷಕರೂ ಇದಕ್ಕೆ ಪ್ರೋತ್ಸಾಹ ನೀಡುತ್ತಿದ್ದರು. ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತಿಸಿದ ಅಕ್ಷಯ್​ ಕುಮಾರ್ ದಂಪತಿ​ ವಿರುದ್ಧ ಪ್ರಕರಣ ದಾಖಲಾಗಿತ್ತು. ಅಲ್ಲದೇ ಅವರ ಬಂಧನ ಕೂಡ ಆಗಿತ್ತು. ಇದಾದ ಬಳಿಕ ಕಾಫಿ ವಿತ್​ ಕರಣ್​ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಟ್ವಿಂಕಲ್​ ಈ ಘಟನೆಯ ಬಗ್ಗೆ ಸಂಪೂರ್ಣ ವಿವರ ನೀಡಿದ್ದರು.

ಘಟನೆಯನ್ನು ನೆನಪಿಸಿಕೊಂಡ ನಟಿ, ಲಕ್ಷಾಂತರ ಜನರು ಪ್ಯಾಂಟ್​ ಜಿಪ್​ ಬಿಚ್ಚುತ್ತಾರೆ, ಪೊಲೀಸ್ ಠಾಣೆಯ ಗೋಡೆ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಾರೆ. ಆದರೆ ಅವರ ಬಂಧನ ಆಗುವುದಿಲ್ಲ. ಆದರೆ ನನ್ನನ್ನು ಬಂಧಿಸಲಾಗಿತ್ತು ಎಂದು ಹೇಳಿದ್ದಾರೆ.

ಕರಣ್ ಜೋಹರ್ ಟ್ವಿಂಕಲ್​ ಖನ್ನಾರನ್ನು , “ಆ ಪ್ರಕರಣ ಇನ್ನೂ ಇದೆಯೇ?” ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಟ್ವಿಂಕಲ್​ ಖನ್ನಾ, “ಹೌದು! ಆದರೆ ನಾನು ಮಾತ್ರ ಆ ಪ್ರಕರಣದಲ್ಲಿದ್ದೇನೆ ಎಂದು ಹೇಳಿದರು. ಇದಕ್ಕೆ ಪ್ರತಿಯಾಗಿ ಅಕ್ಷಯ್​ ಕುಮಾರ್​ ಈ ಪ್ರಕರಣದಲ್ಲಿ ಆರೋಪಿಯಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಇದಕ್ಕೆ ಉತ್ತರಿಸಿದ ಟ್ವಿಂಕಲ್​ ಖನ್ನಾ, ನಮ್ಮ ವಕೀಲರು ಇಬ್ಬರಲ್ಲಿ ಒಬ್ಬರನ್ನು ಪ್ರಕರಣದಿಂದ ನಿರ್ದೋಷಿ ಸಾಬೀತು ಮಾಡಬಹುದು ಎಂದು ಹೇಳಿದರು. ಅದಾದ ಮೇಲೆ ಈ ಪ್ರಕರಣವನ್ನು ನಾನು ಸ್ವ ಇಚ್ಛೆಯಿಂದ ಅಕ್ಷಯ್ ಮೇಲೆ ಹಲ್ಲೆ ನಡೆಸಿ ಅವರ​ ಪ್ಯಾಂಟ್​ ಜಿಪ್ ಸಾರ್ವಜನಿಕವಾಗಿ​ ತೆರೆದಿದ್ದೇನೆ ಎಂದು ಹೇಳಲಾಯ್ತು. ನಾನು ಈಗ 500 ರೂಪಾಯಿ ಬಾಂಡ್​​ನ ಜಾಮೀನಿನ ಮೇಲೆ ಹೊರಗಿದ್ದೇನೆ. ಈಗಲೂ ವಿಕಿಪಿಡೀಯಾದಲ್ಲಿ ಅಶ್ಲೀಲ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದಾರೆ ಎಂದು ನನ್ನ ಬಗ್ಗೆ ಬರೆಯಲಾಗಿದೆ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...