alex Certify ಟಿಕೆಟ್ ಇಲ್ಲದೆ ಪ್ರಯಾಣಿಸ್ತಿದ್ದ ಪೊಲೀಸ್; ಪ್ರಶ್ನಿಸಿದ ಟಿಸಿ ಮೇಲೆ ಹಲ್ಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟಿಕೆಟ್ ಇಲ್ಲದೆ ಪ್ರಯಾಣಿಸ್ತಿದ್ದ ಪೊಲೀಸ್; ಪ್ರಶ್ನಿಸಿದ ಟಿಸಿ ಮೇಲೆ ಹಲ್ಲೆ

ಮುಂಬೈ ವಿಭಾಗದ ಕೇಂದ್ರ ರೈಲ್ವೇಯ ಕರ್ತವ್ಯನಿರತ ಟಿಕೆಟ್ ಪರೀಕ್ಷಕರೊಬ್ಬರು ಉತ್ತರ ಪ್ರದೇಶದ ಸರ್ಕಾರಿ ರೈಲ್ವೇ ಪೊಲೀಸ್ (ಜಿಆರ್‌ಪಿ) ಸಿಬ್ಬಂದಿ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದುದನ್ನು ವಿರೋಧಿಸಿದ ನಂತರ ಅವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.

ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಈ ಕೃತ್ಯವನ್ನು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ವೀಡಿಯೋದಲ್ಲಿ ಜಿಆರ್‌ಪಿ ಸಿಬ್ಬಂದಿಯೊಬ್ಬರು ಟಿಕೆಟ್ ರಹಿತ ಪೊಲೀಸ್, ರೈಲ್ವೇ ಪಾಸ್ ಹೊಂದಿದ್ದರು ಎಂದು ಹೇಳುವುದನ್ನು ಕೇಳಬಹುದು.

ಎಲ್‌ಟಿಟಿ ಲಕ್ನೋ ಎಸಿ ಎಕ್ಸ್ ಪ್ರೆಸ್‌ನಲ್ಲಿ ಟಿಕೆಟ್ ಚೆಕರ್ ಎಂಕೆ ಪೊದ್ದಾರ್ ಅವರು ಕರ್ತವ್ಯ ನಿರ್ವಹಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ರೈಲು ಝಾನ್ಸಿ-ಕಾನ್ಪುರ ಮಾರ್ಗದ ಓರೈ ನಿಲ್ದಾಣವನ್ನು ತಲುಪುತ್ತಿದ್ದಂತೆ, ಟಿಸಿ ಪೋದ್ದಾರ್ ಜಿಆರ್‌ಪಿ ಸಿಬ್ಬಂದಿ ಪ್ರಯಾಣಿಸುತ್ತಿದ್ದ ಕಂಪಾರ್ಟ್‌ಮೆಂಟ್‌ ತಲುಪಿದರು.

ಸರಿಯಾದ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಪೊಲೀಸರನ್ನು ಅವರು ಪತ್ತೆ ಮಾಡಿದರು. ರೈಲ್ವೆ ನಿಯಮಗಳ ಪ್ರಕಾರ ದಂಡ ಪಾವತಿಸುವಂತೆ ತಪ್ಪಿತಸ್ಥ ಪ್ರಯಾಣಿಕರನ್ನು ಕೇಳಿದಾಗ, ಪ್ರಯಾಣಿಕರು ತಾನು ಕಾನ್‌ಸ್ಟೇಬಲ್ ಎಂದು ಹೇಳಿದರು. ದಂಡ ಕಟ್ಟಲು ಅಥವಾ ರೈಲಿನಿಂದ ಇಳಿಯುವಂತೆ ಪೋದ್ದಾರ್ ಮತ್ತೆ ಕೇಳಿಕೊಂಡರು. ಇದರಿಂದ ಸಿಟ್ಟಿಗೆದ್ದ ಪೊಲೀಸರು ತಮ್ಮ ಸಹೋದ್ಯೋಗಿಗಳನ್ನು ಕರೆಸಿ ಪೋದ್ದಾರ್ ಮೇಲೆ ಹಲ್ಲೆ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...