alex Certify WAR BREAKING: ಕನ್ನಡಿಗ ವಿದ್ಯಾರ್ಥಿ ಸಾವಿನ ಬೆನ್ನಲ್ಲೇ ಎಚ್ಚೆತ್ತ ವಿದೇಶಾಂಗ ಇಲಾಖೆ; ಖಾರ್ಕಿವ್ ನಲ್ಲಿರುವ ಭಾರತೀಯ ಪ್ರಜೆಗಳಿಗೆ ಭದ್ರತೆ ನೀಡುವಂತೆ ಮನವಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

WAR BREAKING: ಕನ್ನಡಿಗ ವಿದ್ಯಾರ್ಥಿ ಸಾವಿನ ಬೆನ್ನಲ್ಲೇ ಎಚ್ಚೆತ್ತ ವಿದೇಶಾಂಗ ಇಲಾಖೆ; ಖಾರ್ಕಿವ್ ನಲ್ಲಿರುವ ಭಾರತೀಯ ಪ್ರಜೆಗಳಿಗೆ ಭದ್ರತೆ ನೀಡುವಂತೆ ಮನವಿ

ಕೀವ್; ರಷ್ಯಾ ಶೆಲ್ ದಾಳಿಗೆ ಉಕ್ರೇನ್ ನಲ್ಲಿ ಕರ್ನಾಟಕದ ವಿದ್ಯಾರ್ಥಿ ನವೀನ್ ಸಾವನ್ನಪ್ಪಿದ ಬೆನ್ನಲ್ಲೇ ಎಚ್ಚೆತ್ತ ವಿದೇಶಾಂಗ ಇಲಾಖೆ, ಭಾರತೀಯರ ಸ್ಥಳಾಂತರಕ್ಕೆ ಸುರಕ್ಷಿತ ಮಾರ್ಗಕ್ಕಾಗಿ ರಷ್ಯಾ-ಉಕ್ರೇನ್ ರಾಯಭಾರಿಗಳಿಗೆ ಮನವಿ ಮಾಡಿದೆ.

ಖಾರ್ಕಿವ್ ನಲ್ಲಿರುವ ಭಾರತೀಯ ಪ್ರಜೆಗಳಿಗೆ ಮೊದಲು ಭದ್ರತೆ ನೀಡಬೇಕು. ಅವರ ಸುರಕ್ಷಿತ ಸ್ಥಳಾಂತರಕ್ಕೆ ಮಾರ್ಗಗಳನ್ನು ಹೇಳಿ ಎಂದು ರಷ್ಯಾ ಹಾಗೂ ಉಕ್ರೇನ್ ರಾಯಭಾರಿಗಳನ್ನು ಕರೆಸಿಕೊಂಡು ವಿದೇಶಾಂಗ ಕಾರ್ಯದರ್ಶಿ ಮನವಿ ಮಾಡಿದ್ದಾರೆ.

ಉಕ್ರೇನ್ ನ ಇತರ ನಗರಗಳಲ್ಲಿರುವ ಭಾರತೀಯರ ತುರ್ತು ಸುರಕ್ಷತೆ ಬಗ್ಗೆಯೂ ಇದೇ ವೇಳೆ ಮನವಿ ಮಾಡಲಾಗಿದೆ.

ಯುದ್ಧ ಆರಂಭಕ್ಕೆ ಒಂದು ದಿನ ಮೊದಲು ಸುಖಾಂತ್ಯವಾಯ್ತು ಈ ‘ಲವ್‌ ಕಹಾನಿ’

ಖಾರ್ಕಿವ್ ನಗರದಲ್ಲಿ ರಷ್ಯಾ ಭೀಕರ ದಾಳಿ ನಡೆಸುತ್ತಿದ್ದು, ತಾಯ್ನಾಡಿಗೆ ವಾಪಸ್ ಆಗಬೇಕೆಂಬ ಹಂಬಲದಿಂದ ಪೋಲ್ಯಾಂಡ್ ಗಡಿಗೆ ತೆರಳುತ್ತಿದ್ದ ರಾಜ್ಯದ ಹಾವೇರಿ ಮೂಲದ ವಿದ್ಯಾರ್ಥಿ ನವೀನ್ ರಷ್ಯಾ ಶೆಲ್ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ.

ಈ ನಡುವೆ ಖಾರ್ಕಿವ್ ನಗರದ ಹಾಸ್ಟೇಲ್ ಬಂಕರ್ ನಲ್ಲಿ ಆಶ್ರಯ ಪಡೆದಿರುವ ರಾಜ್ಯದ ವಿದ್ಯಾರ್ಥಿಗಳು ಆಹಾರ ನೀರಿಲ್ಲದೇ ಪರದಾಡುತ್ತಿದ್ದು, ನಮ್ಮನ್ನು ತಕ್ಷಣ ಸ್ಥಳಾಂತರ ಮಾಡಿ ರಷ್ಯಾ ಗುಂಡಿನ ದಾಳಿ, ಬಾಂಬ್ ಸ್ಫೋಟದ ಆತಂಕದಲ್ಲಿ ಹೊರ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...