alex Certify ಹುಲಿಹೈದರ್ ಗ್ರಾಮದಲ್ಲಿ ಘರ್ಷಣೆ ಬಗ್ಗೆ ಐಜಿಪಿ ಮುಖ್ಯ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹುಲಿಹೈದರ್ ಗ್ರಾಮದಲ್ಲಿ ಘರ್ಷಣೆ ಬಗ್ಗೆ ಐಜಿಪಿ ಮುಖ್ಯ ಮಾಹಿತಿ

ಕೊಪ್ಪಳ: ಹುಲಿ ಹೈದರ್ ಗ್ರಾಮದಲ್ಲಿ ಬೆಳಗ್ಗೆ 8ರಿಂದ 10 ಗಂಟೆಯೊಳಗೆ ಘರ್ಷಣೆಯಾಗಿದೆ. ಮೊದಲು ವೈಯಕ್ತಿಕ ಜಗಳವಾಗಿದ್ದು, ನಂತರ ಗುಂಪು ಘರ್ಷಣೆ ನಡೆದಿದೆ ಎಂದು ಬಳ್ಳಾರಿ ವಲಯ ಐಜಿಪಿ ಮನೀಶ್ ಹೇಳಿದ್ದಾರೆ.

ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಹುಲಿಹೈದರ್ ಗ್ರಾಮದಲ್ಲಿ ಅವರು ಮಾತನಾಡಿ, ಗುಂಪು ಘರ್ಷಣೆಯ ವೇಳೆ ಇಬ್ಬರು ವ್ಯಕ್ತಿಗಳ ಸಾವಾಗಿದೆ. ತನಿಖೆ ಪ್ರಗತಿ ಹಂತದಲ್ಲಿರುವುದರಿಂದ ಕಾರಣ ಏನೆಂದು ಹೇಳಲಾಗುವುದಿಲ್ಲ. ಇದು ಕೋಮು ಸಂಘರ್ಷದಂತೆ ಕಾಣುತ್ತಿಲ್ಲ. ಗುಂಪು ಘರ್ಷಣೆಯ ರೀತಿ ಇದೆ. ಹನುಮೇಶ್ ನಾಯಕ್ ಪಾತ್ರದ ಬಗ್ಗೆ ಈಗಲೇ ಏನು ಹೇಳಲಾಗಲ್ಲ. ಹುಲಿಹೈದರ್ ಗ್ರಾಮದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಐಜಿಪಿ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...