alex Certify ದೇವಸ್ಥಾನದಲ್ಲೇ ನಡೀತು ಬರ್ಬರ ಹತ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇವಸ್ಥಾನದಲ್ಲೇ ನಡೀತು ಬರ್ಬರ ಹತ್ಯೆ

ಉತ್ತರ ಪ್ರದೇಶದ ಅಯೋಧ್ಯೆ ಜಿಲ್ಲೆಯ ಗ್ರಾಮವೊಂದರ ದೇವಸ್ಥಾನದಲ್ಲಿ ಮಲಗಿದ್ದ ವ್ಯಕ್ತಿಯೊಬ್ಬನನ್ನು ಆತನ ಸೋದರ ಸಂಬಂಧಿಯೇ ಕತ್ತು ಸೀಳಿ ಕೊಂದಿದ್ದಾನೆ.

ಬಲಿಯಾದವನನ್ನು 35 ವರ್ಷದ ಪಂಕಜ್​ ಶುಕ್ಲಾ ಎಂದು ಗುರುತಿಸಲಾಗಿದೆ, ಆತ ಅಮೇಥಿ ನಿವಾಸಿಯಾಗಿದ್ದು, ತನ್ನ ತಾಯಿಯ ಅಜ್ಜನ ಗ್ರಾಮಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಆತನ ತಾಯಿಯ ಸೋದರ ಸಂಬಂಧಿ ಗುಲ್ಲು ಮಿಶ್ರಾ ಕೊಲೆ ಮಾಡಿದವನಾಗಿದ್ದಾನೆ.

ವ್ಯಾಪ್ತಿಯ ಭೂಪುರ್​ ಗ್ರಾಮದಿಂದ ಬೆಳಗ್ಗೆ 6 ಗಂಟೆ ಸುಮಾರಿಗೆ ಕರೆ ಬಂದಿದ್ದು, ಯುವಕನ ಶವ ದೇವಸ್ಥಾನದಲ್ಲಿ ಬಿದ್ದಿದೆ ಎಂದು ಮಾಹಿತಿ ಬಂದಿತ್ತು ಎಂದು ಕುಮಾರಗಂಜ್​ ಪೊಲೀಸ್​ ಠಾಣೆ ಅಧಿಕಾರಿ ಸತ್ಯೇಂದ್ರ ಭೂಷಣ್​ ತಿವಾರಿ ತಿಳಿಸಿದ್ದಾರೆ.

ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಆತನ ಕತ್ತು ಸೀಳಿರುವುದು ಕಂಡುಬಂದಿತು. ಆರೋಪಿಯನ್ನು ಬಂಧಿಸಲಾಗಿದೆ, ಇಬ್ಬರ ನಡುವೆ ಈ ಹಿಂದೆ ಜಗಳವಾಗಿದ್ದು ಪರಸ್ಪರ ವೈಷಮ್ಯವೇ ಹತ್ಯೆಗೆ ಕಾರಣ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...