alex Certify ಗೋಹತ್ಯೆ ಪ್ರಕರಣದಲ್ಲಿ ಮುಸ್ಲಿಂರ ಬಂಧನಕ್ಕೆ ಸಂಚು ರೂಪಿಸಿದ ನಾಲ್ವರು ಹಿಂದೂ ಕಾರ್ಯಕರ್ತರ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೋಹತ್ಯೆ ಪ್ರಕರಣದಲ್ಲಿ ಮುಸ್ಲಿಂರ ಬಂಧನಕ್ಕೆ ಸಂಚು ರೂಪಿಸಿದ ನಾಲ್ವರು ಹಿಂದೂ ಕಾರ್ಯಕರ್ತರ ಅರೆಸ್ಟ್

ಗೋಹತ್ಯೆ ಪ್ರಕರಣದಲ್ಲಿ ನಾಲ್ವರು ಮುಸ್ಲಿಂರ ಬಂಧನಕ್ಕಾಗಿ ಸಂಚು ರೂಪಿಸಿದ ಆರೋಪದ ಮೇಲೆ ಅಖಿಲ ಭಾರತ ಹಿಂದೂ ಮಹಾಸಭಾದ (ಎಬಿಎಚ್‌ಎಂ) ನಾಲ್ವರು ಮಾಜಿ ಕಾರ್ಯಕರ್ತರನ್ನು ಆಗ್ರಾ ಪೊಲೀಸರು ಬಂಧಿಸಿದ್ದಾರೆ.‌

ಪೊಲೀಸರ ಪ್ರಕಾರ ಆರೋಪಿಗಳಾದ ಸಂಜಯ್ ಜತ್, ಜಿತೇಂದ್ರ ಕುಶ್ವಾಹ, ಬ್ರಜೇಶ್ ಭಡೋರಿಯಾ ಮತ್ತು ಸೌರಭ್ ಶರ್ಮಾ ಸಂಚು ರೂಪಿಸಲು ನಾಲ್ವರು ಮುಸ್ಲಿಂ ವ್ಯಕ್ತಿಗಳ ವಿರೋಧಿಗಳ ಜೊತೆ ಸೇರಿಕೊಂಡಿದ್ದರು.

ಎಬಿಎಚ್‌ಎಂನಿಂದ ಹೊರಹಾಕಲ್ಪಟ್ಟ ಸಂಜಯ್ ಜತ್ ತನ್ನ ವಿರುದ್ಧ 15 ಕ್ರಿಮಿನಲ್ ಮೊಕದ್ದಮೆಗಳನ್ನು ಹೊಂದಿದ್ದರೂ, ಸುಮಾರು 12 ಮಹಿಳೆಯರು ಮತ್ತು 24 ಪುರುಷರನ್ನು ಒಳಗೊಂಡ ದೊಡ್ಡ ತಂಡವನ್ನು ಕಟ್ಟಿದ್ದನು.

ತಾನು ABHM ನ ರಾಷ್ಟ್ರೀಯ ವಕ್ತಾರ ಎಂದು ಪೋಸ್ ನೀಡುತ್ತಿದ್ದ ಎಂಬುದು ಪ್ರಮುಖ ಆರೋಪಿ ಸಂಜಯ್ ಜತ್ ಮೇಲಿರುವ ದೊಡ್ಡ ಆರೋಪ

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...