alex Certify ಬಿಜೆಪಿ ಸೇರ್ಪಡೆಯಾಗಿದ್ದಕ್ಕೆ ಪ್ರಾಯಶ್ಚಿತ್ತವಾಗಿ ‘ಕೇಶ ಮುಂಡನ’ ಮಾಡಿಸಿಕೊಂಡ ತ್ರಿಪುರ ಶಾಸಕ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಜೆಪಿ ಸೇರ್ಪಡೆಯಾಗಿದ್ದಕ್ಕೆ ಪ್ರಾಯಶ್ಚಿತ್ತವಾಗಿ ‘ಕೇಶ ಮುಂಡನ’ ಮಾಡಿಸಿಕೊಂಡ ತ್ರಿಪುರ ಶಾಸಕ….!

ಬಿಜೆಪಿ ತೊರೆದು ತೃಣಮೂಲ ಕಾಂಗ್ರೆಸ್​ ಸೇರ್ಪಡೆಗೆ ಮುಂದಾಗಿರುವ ತ್ರಿಪುರ ಶಾಸಕ ಆಶಿಷ್​ ದಾಸ್​ ಕೊಲ್ಕತ್ತಾ ತಲುಪಿದ್ದಾರೆ. ಆದರೆ ತೃಣಮೂಲ ಕಾಂಗ್ರೆಸ್​ ಸೇರ್ಪಡೆಗೂ ಮುನ್ನ ಆಶಿಷ್​​ ದಾಸ್​ ಮೈಲಿಗೆ ತೊಳೆಯುವ ಕೆಲಸ ಮಾಡಿದ್ದಾರೆ..!

ಖ್ಯಾತ ನಟನ ನಿವಾಸದ ಎದುರೇ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ……!

ಹೋಮ ಹವನ ನಡೆಸಿದ ಆಶಿಷ್​ ದಾಸ್​ ಬಳಿಕ ತಲೆ ಬೋಳಿಸಿಕೊಂಡಿದ್ದಾರೆ. ಇದಾದ ಬಳಿಕ ಕಲಿಘಾಟ್​ನ ಆದಿ ಗಂಗಾದಲ್ಲಿ ತೀರ್ಥ ಸ್ನಾನ ಮಾಡಿದ್ದಾರೆ.
ಇಷ್ಟು ವರ್ಷಗಳ ಕಾಲ ಬಿಜೆಪಿಯಲ್ಲಿ ಸೇವೆ ಸಲ್ಲಿಸಿದ ಕಾರಣಕ್ಕೆ ಪ್ರಾಯಶ್ಚಿತ್ತವಾಗಿ ತಾವು ಈ ಧಾರ್ಮಿಕ ಕಾರ್ಯ ಮಾಡಿರುವುದಾಗಿ ಆಶಿಷ್​ ದಾಸ್​ ಹೇಳಿದ್ದಾರೆ. ಹೋಮ- ಹವನ, ಕೇಶ ಮುಂಡನ ಹಾಗೂ ತೀರ್ಥ ಸ್ನಾನದ ಮೂಲಕ ತಮ್ಮನ್ನು ತಾವು ಶುದ್ಧಗೊಳಿಸಿಕೊಂಡಿರುವುದಾಗಿ ಹೇಳಿದ್ದಾರೆ.

ತ್ರಿಪುರಾದಲ್ಲಿ ಬಿಜೆಪಿ ಶಾಸಕರ ನಡುವೆ ಭಿನ್ನಮತ ಭುಗಿಲೆದ್ದಿದ್ದು ಈ ನಡುವೆಯೇ ಆಶಿಷ್​ ದಾಸ್​ ನಿನ್ನೆ ಭವಾನಿಪುರದಲ್ಲಿ ದಾಖಲೆಯ ಗೆಲುವನ್ನ ಕಂಡ ಮಮತಾ ಬ್ಯಾನರ್ಜಿಗೆ ಶುಭಾಶಯ ಕೋರಿದ್ದರು. ನಾಳೆ ಆಶಿಷ್​ ದಾಸ್​ ತೃಣಮೂಲ ಕಾಂಗ್ರೆಸ್​ ಸೇರ್ಪಡೆಯಾಗಲಿದ್ದಾರೆ.

— Pooja Mehta (@pooja_news) October 5, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...