alex Certify ಈ ಅನಾರೋಗ್ಯಕರ ಅಭ್ಯಾಸಗಳಿಂದ ಸಂಭವಿಸಬಹುದು ಹೃದಯಾಘಾತ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಅನಾರೋಗ್ಯಕರ ಅಭ್ಯಾಸಗಳಿಂದ ಸಂಭವಿಸಬಹುದು ಹೃದಯಾಘಾತ…..!

ಬಿಡುವಿಲ್ಲದ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಯಿಂದಾಗಿ ಹೃದಯಾಘಾತ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಸಾಮಾನ್ಯವಾಗಿ ಹೃದ್ರೋಗಗಳು ವಯಸ್ಸಾದಂತೆ ಸಂಭವಿಸುವ ಸಮಸ್ಯೆ ಎಂದು ಪರಿಗಣಿಸಲಾಗುತ್ತದೆ. ಆದರೆ ಈಗ ಮಕ್ಕಳು ಮತ್ತು ಯುವಕರು ಕೂಡ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ.

ಹೃದಯಾಘಾತ ಏಕೆ ಸಂಭವಿಸುತ್ತದೆ?

ಆರೋಗ್ಯ ತಜ್ಞರ ಪ್ರಕಾರ ಹೃದಯದಲ್ಲಿ ರಕ್ತದ ಹರಿವು ಸ್ಥಗಿತಗೊಂಡಾಗ ಹೃದಯಾಘಾತವಾಗುತ್ತದೆ. ಈ ರೀತಿಯ ತಡೆಗಟ್ಟುವಿಕೆ ಸಾಮಾನ್ಯವಾಗಿ ನಾಳಗಳಲ್ಲಿ ಕೊಬ್ಬು, ಕೊಲೆಸ್ಟ್ರಾಲ್ ಮತ್ತು ಇತರ ಪದಾರ್ಥಗಳ ಸಂಗ್ರಹದಿಂದ ಉಂಟಾಗುತ್ತದೆ. ನಾವು ಪ್ರತಿದಿನ ಕೆಲವು ಕೆಲಸಗಳನ್ನು ತಿಳಿದೋ ತಿಳಿಯದೆಯೋ ಮಾಡುತ್ತಿರುತ್ತೇವೆ. ಇದರಿಂದ ಹೃದಯಾಘಾತದ ಅಪಾಯ ಹೆಚ್ಚುತ್ತದೆ. ಆ ತಪ್ಪುಗಳ ಬಗ್ಗೆ ತಿಳಿದುಕೊಂಡು ತಮ್ಮನ್ನು ತಾವು ರಕ್ಷಿಸಿಕೊಳ್ಳುವುದು ಬಹಳ ಮುಖ್ಯ.

ಹೃದಯಾಘಾತದ ಅಪಾಯ ಹೆಚ್ಚಿಸುವ ಅಭ್ಯಾಸಗಳು!

ತೂಕ ಹೆಚ್ಚಳ – ಹೆಚ್ಚಿನ ಜನರು ಬೊಜ್ಜು ಅಥವಾ ಅಧಿಕ ತೂಕದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದು ಹೃದಯಾಘಾತಕ್ಕೆ ಕಾರಣವಾಗಬಲ್ಲ ಅಪಾಯಕಾರಿ ಅಂಶಗಳಲ್ಲಿ ಒಂದು. ಸ್ಥೂಲಕಾಯತೆಯು ಹೈ ಬಿಪಿ, ಅಧಿಕ ಕೊಲೆಸ್ಟ್ರಾಲ್, ಅಧಿಕ ಟ್ರೈಗ್ಲಿಸರೈಡ್‌ಗಳು, ಮಧುಮೇಹ ಹೀಗೆ ಹೃದಯಾಘಾತಕ್ಕೆ ಕಾರಣವಾಗಬಲ್ಲ ಅನೇಕ ಅಂಶಗಳನ್ನು ಹೆಚ್ಚಿಸುತ್ತದೆ. ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಲು ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು.

ಧೂಮಪಾನ ಮತ್ತು ಉದ್ವೇಗಧೂಮಪಾನ ಮಾಡುವವರು ಮತ್ತು ಹೆಚ್ಚಿನ ಒತ್ತಡವನ್ನು ಹೊಂದಿರುವವರು ಹೃದಯಾಘಾತದ ಅಪಾಯವನ್ನು ಹೊಂದಿರುತ್ತಾರೆ. ಧೂಮಪಾನವು ಕಾಲಾನಂತರದಲ್ಲಿ ಅಪಧಮನಿಗಳಲ್ಲಿ ಪ್ಲೇಕ್ ಅನ್ನು ಉಂಟುಮಾಡುತ್ತದೆ. ಅಪಧಮನಿಗಳ ಕಿರಿದಾಗುವಿಕೆಗೆ ಕಾರಣವಾಗುತ್ತದೆ ಮತ್ತು ಹೃದಯಕ್ಕೆ ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ಹೃದಯಾಘಾತದ ಸಾಧ್ಯತೆ ಹೆಚ್ಚಾಗುತ್ತದೆ.ಅದೇ ರೀತಿ ಅತಿಯಾದ ಒತ್ತಡವು ರಕ್ತದೊತ್ತಡದ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಇದು ಹೃದಯಕ್ಕೆ ಮಾರಕವಾಗಬಲ್ಲದು. ಅದಕ್ಕಾಗಿಯೇ ಒತ್ತಡಮುಕ್ತರಾಗಿರಿ.

ದೈಹಿಕ ನಿಷ್ಕ್ರಿಯತೆ ಕೆಲವರು ಸದಾ ವಿಶ್ರಾಂತಿ ಜೀವನವನ್ನು ಬಯಸುತ್ತಾರೆ. ಈ ಅಭ್ಯಾಸವು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ. ದೈಹಿಕ ನಿಷ್ಕ್ರಿಯತೆಯು ಹೃದಯದ ಕಾಯಿಲೆಗಳಿಗೆ ಕಾರಣವಾಗುತ್ತದೆ. ಏಕೆಂದರೆ ದೇಹವು ನಿಷ್ಕ್ರಿಯವಾಗಿದ್ದಾಗ, ಕೊಬ್ಬಿನ ಪದಾರ್ಥಗಳು ಅಪಧಮನಿಗಳಲ್ಲಿ ಸಂಗ್ರಹಗೊಳ್ಳಲು ಪ್ರಾರಂಭಿಸುತ್ತವೆ. ಹೃದಯಕ್ಕೆ ರಕ್ತವನ್ನು ಸಾಗಿಸುವ ಅಪಧಮನಿಗಳು ಹಾನಿಗೊಳಗಾದರೆ ಅಥವಾ ಮುಚ್ಚಿಹೋಗಿದ್ದರೆ, ಅದು ಹೃದಯಾಘಾತಕ್ಕೆ ಕಾರಣವಾಗಬಹುದು. ಅದಕ್ಕಾಗಿಯೇ ಪ್ರತಿದಿನ ವ್ಯಾಯಾಮ ಮಾಡಬೇಕು. ನಿಯಮಿತ ವ್ಯಾಯಾಮ ಮಾಡುವುದರಿಂದ ಹೃದಯಾಘಾತ ಮತ್ತು ಹೃದ್ರೋಗದ ಅಪಾಯವನ್ನು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಮಾಡಬಹುದು.

ಹೃದಯಾಘಾತದ ಲಕ್ಷಣಗಳು

– ವಿಪರೀತ ಎದೆನೋವು

– ವಿಪರೀತ ಬೆವರುವಿಕೆ

– ಉಸಿರಾಟದ ತೊಂದರೆ

– ವಾಂತಿ, ವಾಕರಿಕೆ

– ತಲೆತಿರುಗುವಿಕೆ

– ಹಠಾತ್ ಆಯಾಸ

-ಕೆಲವು ನಿಮಿಷ ಎದೆಯ ಮಧ್ಯದಲ್ಲಿ ತೀವ್ರ ನೋವು, ಭಾರ ಅಥವಾ ಸಂಕೋಚನದ ಅನುಭವ.

-ಹೃದಯದಿಂದ ಭುಜಗಳು, ಕುತ್ತಿಗೆ, ತೋಳುಗಳು ಮತ್ತು ದವಡೆಯವರೆಗೂ ನೋವು

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...