alex Certify Watch: ಅಕ್ರಮ ಸಂಬಂಧವಿಲ್ಲವೆಂದು ಸಾಬೀತುಪಡಿಸಲು ಗಂಡನ ಅಗ್ನಿಪರೀಕ್ಷೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Watch: ಅಕ್ರಮ ಸಂಬಂಧವಿಲ್ಲವೆಂದು ಸಾಬೀತುಪಡಿಸಲು ಗಂಡನ ಅಗ್ನಿಪರೀಕ್ಷೆ

ಪೌರಾಣಿಕ ಮಹಾಕಾವ್ಯ ರಾಮಾಯಣದಲ್ಲಿ, ಸೀತಾ ದೇವಿಯು ಅಗ್ನಿಪರೀಕ್ಷೆಯನ್ನು ತೆಗೆದುಕೊಳ್ಳುವ ಮೂಲಕ ತನ್ನ ಶುದ್ಧತೆಯನ್ನು ಸಾಬೀತುಪಡಿಸಬೇಕಾಯಿತು. ಇಂಥದ್ದೇ ಘಟನೆ ತೆಲಂಗಾಣದ ಮುಲುಗುವಿನಲ್ಲಿ ಸಂಭವಿಸಿದೆ.

ಒಬ್ಬ ವ್ಯಕ್ತಿ ಬಿಸಿ ಕಲ್ಲಿದ್ದಲಿನ ಹಾಸಿನ ಮೇಲೆ ನಡೆದು ತಾನು ನಿರಪರಾಧಿ ಎಂದು ಸಾಬೀತುಪಡಿಸುವ ವಿಡಿಯೋ ಇದಾಗಿದೆ. ಬಿಸಿಯಾದ ಸಲಿಕೆಯನ್ನು ತನ್ನ ಕೈಗಳಿಂದ ತೆಗೆದಿದ್ದಾನೆ. ಅಗ್ನಿಪರೀಕ್ಷೆಯನ್ನು ತೆಗೆದುಕೊಳ್ಳುವ ಮೂಲಕ ಪುರುಷನು ತನ್ನ ಹೆಂಡತಿಯ ಕಡೆಗೆ ತನ್ನ ನಿಷ್ಠೆಯನ್ನು ಸಾಬೀತುಪಡಿಸಿದ್ದಾನೆ ಎನ್ನಲಾಗಿದೆ.

ಇದರ ವೀಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಬಂಜಾರುಪಲ್ಲೆ ಗ್ರಾಮದ ನಿವಾಸಿ ಗಂಗಾಧರ್ ಎಂಬಾತ ತನ್ನ ಹೆಂಡತಿಗೆ ವಂಚನೆ ಮತ್ತು ತನ್ನ ಅಣ್ಣನ ಹೆಂಡತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಈ ಅಗ್ನಿಪರೀಕ್ಷೆ ತೆಗೆದುಕೊಂಡಿದ್ದಾನೆ. ಈತನ ಪತ್ನಿ ಗಂಡನನ್ನು ಶಂಕಿಸಿರಲಿಲ್ಲ. ಆದರೆ ಗ್ರಾಮಸ್ಥರು ಶಂಕಿಸಿದ್ದರಿಂದ ಹೀಗೆ ಮಾಡಲಾಗಿದೆ. ಮುಂದೇನಾಯಿತು ಎಂಬ ಬಗ್ಗೆ ಸದ್ಯ ಮಾಹಿತಿ ಸಿಕ್ಕಿಲ್ಲ.

— Revathi (@revathitweets) March 1, 2023

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...