alex Certify ಬೆಚ್ಚಿಬೀಳಿಸುತ್ತೆ ಈ ಕೃತ್ಯ: ಪ್ರಿಯತಮೆ ಪುತ್ರಿ ಮೇಲೆ ಅತ್ಯಾಚಾರವೆಸಗಿ ಹತ್ಯೆಗೈದ ಪಾಪಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿಬೀಳಿಸುತ್ತೆ ಈ ಕೃತ್ಯ: ಪ್ರಿಯತಮೆ ಪುತ್ರಿ ಮೇಲೆ ಅತ್ಯಾಚಾರವೆಸಗಿ ಹತ್ಯೆಗೈದ ಪಾಪಿ

ಬೆಚ್ಚಿಬೀಳಿಸುವ ಅಪರಾಧವೊಂದರಲ್ಲಿ, ತಮಿಳುನಾಡಿನ ಕೊಯಮತ್ತೂರಿನಲ್ಲಿ 44 ವರ್ಷದ ಕ್ರೂರಿಯೊಬ್ಬ 14 ವರ್ಷದ ಬಾಲಕಿ ಮೇಲೆ ಅತ್ಯಾಚಾರಗೈದು, ಆಕೆಯನ್ನು ಕೊಲೆ ಮಾಡಿ ದೇಹವನ್ನು ಪ್ಲಾಸ್ಟಿಕ್ ಚೀಲವೊಂದರಲ್ಲಿ ತುಂಬಿ ತ್ಯಾಜ್ಯ ಸುರಿಯುವ ಜಾಗದಲ್ಲಿ ಬಿಸಾಡಿದ್ದಾನೆ.

ತಾನು ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಮಹಿಳೆಯ 14 ವರ್ಷದ ಮಗಳ ಮೇಲೆ ಹೀಗೆ ಮಾಡಿರುವ ಈ ಕ್ರೂರಿಯ ಹೆಸರು ಮುತ್ತುಕುಮಾರ್‌. ತನ್ನ ಪತಿಯಿಂದ ಎಂಟು ವರ್ಷಗಳ ಹಿಂದೆ ಬೇರ್ಪಟ್ಟ ಮಹಿಳೆಯೊಬ್ಬಳೊಂದಿಗೆ ಸಂಬಂಧ ಇಟ್ಟುಕೊಂಡಿದ್ದ ಮುತ್ತುಕುಮಾರ್‌, ಆಕೆಯಿಂದ 2.5 ಸಾವರಿನ್ ಚಿನ್ನ ಮತ್ತು 50,000 ರೂ. ನಗದನ್ನೂ ಕಿತ್ತುಕೊಂಡಿದ್ದ. ಹೊಸ ಒಡವೆ ಮಾಡಿಸಿಕೊಡುವುದಾಗಿ ನಂಬಿಸಿ ಹೀಗೆ ದುಡ್ಡು ಕಿತ್ತಿದ್ದ ಮುತ್ತುಕುಮಾರನನ್ನು ಆ ಮಹಿಳೆ ತನ್ನ ಒಡವೆ ಮತ್ತು ದುಡ್ಡನ್ನು ಮರಳಿ ಕೊಡಲು ಕೇಳಿದಾಗ ಸ್ವಲ್ಪ ವೈಮನಸ್ಯ ಏರ್ಪಟ್ಟಿತ್ತು.

BIG NEWS: ಬೆಳಗಾವಿ ಹಿಂಸಾಚಾರ ಪ್ರಕರಣ; 27 ಪುಂಡರಿಗೆ ನ್ಯಾಯಾಂಗ ಬಂಧನ

ಡಿಸೆಂಬರ್‌ 11ರಂದು ಮಹಿಳೆಯ ಜಾಗಕ್ಕೆ ಭೇಟಿ ನೀಡಿದ ಮುತ್ತುಕುಮಾರ್‌, ಆ ವೇಳೆ ಮನೆಯಲ್ಲಿ ಒಬ್ಬಳೇ ಇದ್ದ ಅಪ್ರಾಪ್ತ ವಯಸ್ಸಿನ ಮಗಳನ್ನು ಕಂಡಿದ್ದಾನೆ. ಒಡವೆಗಳನ್ನು ತನಗೆ ಕೊಟ್ಟಿರುವುದಾಗಿ ಹೇಳಲು ತನ್ನ ತಾಯಿಗೆ ಕರೆ ಮಾಡಲು ಬಾಲಕಿಗೆ ತಿಳಿಸಿದ್ದಾನೆ ಮುತ್ತುಕುಮಾರ್‌. ತನ್ನ ಮನೆಗೆ ಬಂದು ಒಡವೆಗಳನ್ನು ಪಡೆದುಕೊಳ್ಳಲು ಬಾಲಕಿಗೆ ಹೇಳಿದ ಮುತ್ತುಕುಮಾರ್‌, ಆಕೆ ತನ್ನ ಮನೆಗೆ ಬರುತ್ತಲೇ ಅತ್ಯಾಚಾರಗೈಯ್ಯಲು ನೋಡಿದ್ದಾನೆ. ಇದಕ್ಕೆ ಪ್ರತಿರೋಧ ಒಡ್ಡಿದ ಬಾಲಕಿಗೆ ಶಾಲ್‌ ಮತ್ತು ದಿಂಬುಗಳನ್ನು ಬಳಸಿ ಆಕೆಯ ಉಸಿರುಗಟ್ಟಿಸಿದ ಮುತ್ತು ಕುಮಾರ್‌, ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ವರದಿಯಾಗಿದೆ.

ಇಷ್ಟು ಮಾಡಿದ ಮೇಲೆ ಬಾಲಕಿಯ ಶವವನ್ನು ತ್ಯಾಜ್ಯ ಸುರಿಯುವ ಜಾಗದಲ್ಲಿ ಎಸೆದ ಮುತ್ತುಕುಮಾರ್‌, ಆಕೆಯ ತಾಯಿಯೊಂದಿಗೆ ಖುದ್ದು ತಾನೇ ಪೊಲೀಸ್ ಠಾಣೆಗೆ ಆಗಮಿಸಿ ಆಕೆ ತಪ್ಪಿಸಿಕೊಂಡಿದ್ದಾಳೆ ಎಂದು ದೂರು ನೀಡಿದ್ದಾನೆ. ಸಂತ್ರಸ್ತೆಯ ದೇಹವು ಕೊಳೆಯಲು ಆರಂಭಿಸಿ ತ್ಯಾಜ್ಯ ವಿಲೇವಾರಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಗಮನಕ್ಕ ಬಂದಿದೆ. ಇದಾದ ಬೆನ್ನಿಗೆ ಪೊಲೀಸರು ತನಿಖೆ ನಡೆಸಿದಾಗ ಸತ್ಯ ಗೊತ್ತಾಗಿದ್ದು, ಮುತ್ತುಕುಮಾರನನ್ನು ಬಂಧಿಸಿದ್ದಾರೆ.

ಮುತ್ತುಕುಮಾರನ ವಿರುದ್ಧ ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದ್ದು ಆತ ಸದ್ಯಕ್ಕೆ ಜೈಲಿನಲ್ಲಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...