alex Certify ಸೋನು ಸೂದ್-‌ ಕೇಜ್ರಿವಾಲ್‌ ಭೇಟಿ ಹಿಂದಿನ ರಹಸ್ಯ ಕೊನೆಗೂ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೋನು ಸೂದ್-‌ ಕೇಜ್ರಿವಾಲ್‌ ಭೇಟಿ ಹಿಂದಿನ ರಹಸ್ಯ ಕೊನೆಗೂ ಬಹಿರಂಗ

ದೆಹಲಿಯ ಅರವಿಂದ್​ ಕೇಜ್ರಿವಾಲ್​ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆ ʼದೇಶ್​ ಕೆ ಮೆಂಟರ್ʼ​​ ಕಾರ್ಯಕ್ರಮದ ಬ್ರ್ಯಾಂಡ್​ ಅಂಬಾಸಿಡರ್​ ಆಗಿ ಸೋನು ಸೂದ್​ರ ಹೆಸರು ಘೋಷಣೆಯಾಗಿದೆ.

ದೆಹಲಿಯಲ್ಲಿಂದು ಸಿಎಂ ಅರವಿಂದ ಕೇಜ್ರಿವಾಲ್​ರನ್ನ ನಟ ಸೋನು ಸೂದ್​ ಭೇಟಿಯಾಗಿದ್ದು, ಈ ಭೇಟಿಯ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡಿವೆ.

ಸುದ್ದಿಗೋಷ್ಠಿಯಲ್ಲಿ ದೇಶ್​ ಕೆ ಮೆಂಟರ್​ ಕಾರ್ಯಕ್ರಮಕ್ಕೆ ನಟ ಸೋನು ಸೂದ್​ ಬ್ರ್ಯಾಂಡ್​ ಅಂಬಾಸಿಡರ್​ ಎಂದು ಘೋಷಣೆಯಾಗಿದೆ. ಈ ಕಾರ್ಯಕ್ರಮದ ಅಡಿಯಲ್ಲಿ ದೆಹಲಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ವೃತ್ತಿಪರರು ಮಾರ್ಗದರ್ಶನ ನೀಡಲಿದ್ದಾರೆ.

ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ಫೋಟೋಗಳಲ್ಲಿ ದೆಹಲಿ ಸಿಎಂ ಕೇಜ್ರಿವಾಲ್​ ಹಾಗೂ ಸೋನು ಸೂದ್​​​ ಪರಸ್ಪರ ಚರ್ಚೆ ನಡೆಸುತ್ತಿರೋದನ್ನು ಕಾಣಬಹುದಾಗಿದೆ. ವರದಿಗಳ ಪ್ರಕಾರ ಸಿಎಂ ಕೇಜ್ರಿವಾಲ್​ ಕೊರೊನಾ ಸಂದರ್ಭದಲ್ಲಿ ದೇಶದ ಜನತೆಗೆ ಸಹಾಯ ಮಾಡಿದ ಸೋನು ಸೂದ್​ರ ಮಾನವೀಯ ಮೌಲ್ಯಗಳನ್ನು ಪ್ರಶಂಸಿದ್ರು ಎನ್ನಲಾಗಿದೆ.

ಕೇಜ್ರಿವಾಲ್ ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆಯು ಸೆಪ್ಟೆಂಬರ್​ ಮಧ್ಯಭಾಗದಿಂದ ಆರಂಭವಾಗಲಿದೆ. ತಮ್ಮ ಕ್ಷೇತ್ರದಲ್ಲಿ ಹಿಡಿತ ಸಾಧಿಸಿದ ವೃತ್ತಿಪರರು ದೆಹಲಿ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಮುಂದಿನ ಭವಿಷ್ಯದ ಕುರಿತಂತೆ ಮಾರ್ಗದರ್ಶನ ನೀಡಲಿದ್ದಾರೆ. ಸೋನು ಸೂದ್​ರನ್ನು ಇಂತಹ ಕಾರ್ಯಕ್ರಮಕ್ಕೆ ಬ್ರ್ಯಾಂಡ್​ ಅಂಬಾಸಿಡರ್​ ಆಗಿ ಘೋಷಣೆ ಮಾಡಿದ್ದಕ್ಕೆ ಸಾಕಷ್ಟು ಪ್ರಶಂಸೆಗಳು ಕೇಳಿ ಬಂದಿವೆ.

— AAP (@AamAadmiParty) August 27, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...