alex Certify ಸ್ಮಶಾನದಲ್ಲಿತ್ತು ಬರೋಬ್ಬರಿ 16 ಕೆಜಿ ಚಿನ್ನ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಮಶಾನದಲ್ಲಿತ್ತು ಬರೋಬ್ಬರಿ 16 ಕೆಜಿ ಚಿನ್ನ….!

ಚೆನ್ನೈ : ಖದೀಮನೊಬ್ಬ ತಾನು ಕದ್ದಿದ್ದ ಬರೋಬ್ಬರಿ 16 ಕೆಜಿಯಷ್ಟು ಚಿನ್ನವನ್ನು ಸ್ಮಶಾನದಲ್ಲಿ ಹೂತಿಟ್ಟು ಈಗ ಪೊಲೀಸರ ಅತಿಥಿಯಾಗಿದ್ದಾನೆ.

ವೆಲ್ಲೂರಿನಲ್ಲಿ ಇತ್ತೀಚೆಗೆ ಖದೀಮನೊಬ್ಬ ಮುಸುಕು ವೇಷದಲ್ಲಿ ಬಂದು ಚಿನ್ನದಂಗಡಿ ದೋಚಿ ಪರಾರಿಯಾಗಿದ್ದ. ಈ ಕುರಿತು ಪ್ರಕರಣ ದಾಖಲಾಗುತ್ತಿದ್ದಂತೆ ಕಳ್ಳನನ್ನು ಹಿಡಿಯಲು ಪೊಲೀಸರ ತಂಡ ರಚಿಸಲಾಗಿತ್ತು. ಕೊನೆಗೂ ಈತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಈ ಕಳ್ಳ ಒಡುಕತ್ತೂರಿನಲ್ಲಿ ಇರುವ ಸ್ಮಶಾನದಲ್ಲಿ ಕದ್ದ ಚಿನ್ನವನ್ನು ಅಡಗಿಸಿಟ್ಟಿದ್ದ. ವೆಲ್ಲೂರು ಪೊಲೀಸರು ಕಳ್ಳನನ್ನು ಬಂಧಿಸಿದ್ದು, ಸ್ಮಶಾನದಲ್ಲಿ ಅಡಗಿಸಿಟ್ಟಿದ್ದ 16 ಕೆಜಿ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ. ಆದರೆ, ಕಳ್ಳನ ಕುರಿತು ಪೊಲೀಸರಿಂದ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...