alex Certify BREAKING: ಹೆದ್ದಾರಿಯಲ್ಲಿ 22 ಚಕ್ರಗಳ ಟ್ರಕ್ ಅಡಿಗೆ ಅಪ್ಪಳಿಸಿದ ಕಾರ್: ಭೀಕರ ಅಪಘಾತದಲ್ಲಿ 6 ಮಂದಿ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಹೆದ್ದಾರಿಯಲ್ಲಿ 22 ಚಕ್ರಗಳ ಟ್ರಕ್ ಅಡಿಗೆ ಅಪ್ಪಳಿಸಿದ ಕಾರ್: ಭೀಕರ ಅಪಘಾತದಲ್ಲಿ 6 ಮಂದಿ ಸಾವು

ಮುಜಾಫರ್‌ ನಗರ: ಉತ್ತರ ಪ್ರದೇಶದ ಮುಜಾಫರ್‌ ನಗರ ಜಿಲ್ಲೆಯಲ್ಲಿ 22 ಚಕ್ರಗಳ ಟ್ರಕ್‌ ನಡಿಗೆ ಕಾರ್ ಡಿಕ್ಕಿಯಾಗಿ 6 ಮಂದಿ ಸಾವನ್ನಪ್ಪಿದ್ದಾರೆ.

ಕಾರ್ ದೆಹಲಿಯಿಂದ ಹರಿದ್ವಾರಕ್ಕೆ ಹೋಗುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ 58 ರಲ್ಲಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಕಾರ್ ನಜ್ಜುಗುಜ್ಜಾದ ಪರಿಣಾಮ ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ. ಮೃತರೆಲ್ಲರೂ ದೆಹಲಿಯ ಶಹದಾರದವರು ಎಂದು ಹೇಳಲಾಗಿದೆ. ಬಳಿಕ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಮೃತರನ್ನು ಶಿವಂ, ಪರ್ಶ್, ಕುನಾಲ್, ಧೀರಜ್, ವಿಶಾಲ್ ಮತ್ತು ಅವರ ಸ್ನೇಹಿತರು ಎಂದು ಗುರುತಿಸಲಾಗಿದೆ. ಟ್ರಕ್ ಅಡಿಯಲ್ಲಿ ಸಿಲುಕಿದ್ದ ಕಾರನ್ನು ಪೊಲೀಸರು ಮತ್ತು ರಕ್ಷಣಾ ಕಾರ್ಯಕರ್ತರು ಹೊರತೆಗೆದಿದ್ದಾರೆ.

ಇಂದು ಛಾಪರ್ ಪೊಲೀಸ್ ಠಾಣೆಗೆ ಶಾಹಪುರ್ NH 58 ನಲ್ಲಿ ರಸ್ತೆ ಅಪಘಾತದ ಬಗ್ಗೆ ಮಾಹಿತಿ ಸಿಕ್ಕಿತು. ಮಾಹಿತಿ ಪಡೆದ ಪ್ರದೇಶ ಅಧಿಕಾರಿ ಸದರ್ ಮತ್ತು ಪೊಲೀಸ್ ಠಾಣೆಯ ಪ್ರಭಾರಿ ಛಾಪರ್ ತಕ್ಷಣ ಸ್ಥಳಕ್ಕೆ ತಲುಪಿ ಪರಿಶೀಲಿಸಿದರು. ಸಿಯಾಜ್ ಕಾರ್ ನಿಯಂತ್ರಣ ತಪ್ಪಿ ಹೋಗಿರುವುದು ಕಂಡುಬಂದಿದೆ ಎಂದು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...