alex Certify ಸಿಡಿ ಪ್ರಕರಣ: ಯುವತಿ ಹೇಳಿಕೆ ಮುಕ್ತಾಯ, ಮತ್ತೆ SIT ನೋಟಿಸ್ – ಆರೋಪಿ ಬಂಧನ ಯಾವಾಗ? ಎಂದ್ರು ಜಗದೀಶ್ ಕುಮಾರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಡಿ ಪ್ರಕರಣ: ಯುವತಿ ಹೇಳಿಕೆ ಮುಕ್ತಾಯ, ಮತ್ತೆ SIT ನೋಟಿಸ್ – ಆರೋಪಿ ಬಂಧನ ಯಾವಾಗ? ಎಂದ್ರು ಜಗದೀಶ್ ಕುಮಾರ್

ಬೆಂಗಳೂರಿನ ಆಡುಗೋಡಿಯಲ್ಲಿರುವ ಟೆಕ್ನಿಕಲ್ ವಿಂಗ್ ನಲ್ಲಿ ಎಸ್ಐಟಿ ಅಧಿಕಾರಿಗಳ ಎದುರು ಸಿಡಿ ಪ್ರಕರಣದ ಯುವತಿ ಹೇಳಿಕೆ ನೀಡಿದ್ದಾರೆ.

ಅವರಿಗೆ ಮತ್ತೊಂದು ನೊಟೀಸ್ ಜಾರಿ ಮಾಡಲಾಗಿದ್ದು ನಾಳೆ ವಿಚಾರಣೆಗೆ ಬರುವಂತೆ ತಿಳಿಸಲಾಗಿದೆ. ಇಂದು ಹೇಳಿಕೆ ನೀಡಲು ಆಡುಗೋಡಿಯ ಟೆಕ್ನಿಕಲ್ ಸೆಲ್ ಗೆ ಆಗಮಿಸಿದ್ದ ಯುವತಿಯಿಂದ ಸೆಕ್ಷನ್ 161 ರ ಅಡಿಯಲ್ಲಿ ಹೇಳಿಕೆ ಪಡೆದುಕೊಂಡಿದ್ದು, ನಾಳೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.

ಪ್ರಕರಣದ ಆರೋಪಿ ಬಂಧನ ಯಾವಾಗ ಎಂದು ಸಿಡಿ ಪ್ರಕರಣದ ಯುವತಿ ಪರ ವಕೀಲ ಜಗದೀಶ್ ಕುಮಾರ್ ಪ್ರಶ್ನಿಸಿದ್ದಾರೆ. ಯುವತಿ ಮ್ಯಾಜಿಸ್ಟ್ರೇಟ್ ಎದುರು ಹಾಜರಾಗಿ ಹೇಳಿಕೆ ದಾಖಲಿಸಿದ ಬಳಿಕ ಎಸ್ಐಟಿ ಅಧಿಕಾರಿಗಳ ಎದುರು ಹೇಳಿಕೆ ನೀಡಿದ್ದಾರೆ. ಇಷ್ಟು ದಿನ ಇದೆಲ್ಲ ಊಹಾಪೋಹ ಎಂದು ಹೇಳಲಾಗ್ತಿತ್ತು. ಇದಕ್ಕೆಲ್ಲ ತೆರೆಬಿದ್ದಿದ್ದು, ಸರ್ಕಾರ, ಪೊಲೀಸರು ಆರೋಪಿಯನ್ನು ಬಂಧಿಸಬೇಕು ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...