alex Certify ಕಾಂಗ್ರೆಸ್​​​​ ಚುನಾವಣೆಯಲ್ಲಿ ಗೆಲ್ಲದಂತೆ ಮಾಡಿದ್ದೇ ಸಿದ್ದರಾಮಯ್ಯ: ಸಿ.ಟಿ. ರವಿ ಹೊಸ ಬಾಂಬ್​​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಂಗ್ರೆಸ್​​​​ ಚುನಾವಣೆಯಲ್ಲಿ ಗೆಲ್ಲದಂತೆ ಮಾಡಿದ್ದೇ ಸಿದ್ದರಾಮಯ್ಯ: ಸಿ.ಟಿ. ರವಿ ಹೊಸ ಬಾಂಬ್​​

ಸಿದ್ದರಾಮಯ್ಯ ರೆಸಾರ್ಟ್​ಗೆ ಹೋದಾಗೆಲ್ಲ ಕಾಂಗ್ರೆಸ್​ ಗೆಲ್ಲಬಾರದು ಎಂಬ ಸಂದೇಶವನ್ನು ನೀಡ್ತಾರೆ ಎಂದು ಹೇಳುವ ಮೂಲಕ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೊಸ ಬಾಂಬ್​ ಸಿಡಿಸಿದ್ದಾರೆ. ಕಲಬುರಗಿಯಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು ಚುನಾವಣೆಯಲ್ಲಿ ಕಾಂಗ್ರೆಸ್​ ಗೆಲ್ಲದಂತೆ ಮಾಡೋದೇ ಸಿದ್ದರಾಮಯ್ಯ ಎಂದು ಹೇಳಿದ್ರು.

ಕಾಂಗ್ರೆಸ್​ ಚುನಾವಣೆಗಳಲ್ಲಿ ಗೆಲ್ಲಬಾರದು ಎಂಬ ಸಂದೇಶವನ್ನ ಕೆಲವೊಮ್ಮೆ ನೇರವಾಗಿ ಹಾಗೂ ಇನ್ನೊಮ್ಮೆ ಹಿಂಬಾಲಕರ ಮೂಲಕ ನೀಡಿದ್ದಾರೆ. ಈ ಬಾರಿ ಡಿ.ಕೆ. ಶಿವಕುಮಾರ್​ ನೇತೃತ್ವದಲ್ಲಿ ಚುನಾವಣೆ ಗೆಲ್ಲದಂತೆ ಸಂದೇಶ ನೀಡಿದ್ದಾರೆ. ಈ ಹಿಂದೆ ಪರಮೇಶ್ವರ್​ ಹಾಗೂ ಖರ್ಗೆಯನ್ನು ಸೋಲಿಸಲು ಸಿದ್ದರಾಮಯ್ಯ ಸಂದೇಶ ನೀಡಿದ್ದರು ಎಂದು ಹೇಳಿದ್ರು.

ಕಾಂಗ್ರೆಸ್​ ತನ್ನ ಬಳಿ ಇಲ್ಲದಿರೋ ಮುಖ್ಯಮಂತ್ರಿ ಖುರ್ಚಿಗೆ ನಾಲ್ಕೈದು ಮಂದಿ ನಾಯಕರು ಟವೆಲ್​ ಹಾಕಿದ್ದಾರೆ. ಪಕ್ಷವನ್ನು ಕಟ್ಟಲು ಆಗದವರಿಗೆ ಹಗಲುಗನಸು ಕಾಣುವ ನೈತಿಕತೆ ಇಲ್ಲ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿಯೂ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...