alex Certify SHOCKING NEWS: ಪ್ರಯಾಣಿಕನ ಮೇಲೆ KSRTC ಕಂಡಕ್ಟರ್ ದರ್ಪ; ಬೂಟು ಕಾಲಿನಿಂದ ಒದ್ದ ನಿರ್ವಾಹಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: ಪ್ರಯಾಣಿಕನ ಮೇಲೆ KSRTC ಕಂಡಕ್ಟರ್ ದರ್ಪ; ಬೂಟು ಕಾಲಿನಿಂದ ಒದ್ದ ನಿರ್ವಾಹಕ

ಯಾದಗಿರಿ: ಕೆ.ಎಸ್.ಆರ್.ಟಿ.ಸಿ ಬಸ್ ಕಂಡಕ್ಟರ್ ಓರ್ವ ಪ್ರಯಾಣಿಕನಿಗೆ ಬೂಟು ಕಾಲಿನಿಂದ ಒದ್ದು ಹಲ್ಲೆ ನಡೆಸಿರುವ ಘಟನೆ ಯಾದಗಿರಿ ಜಿಲ್ಲೆಯ ಗುರುಮಿಠಕಲ್ ಬಸ್ ನಿಲ್ದಾಣದಲ್ಲಿ ನಡೆದಿದೆ.

ಬಸ್ ಕಂಡಕ್ಟರ್ ಸಿದ್ದಪ್ಪ ಪ್ರಯಾಣಿಕನನ್ನು ಬೂಟು ಕಾಲಿನಿಂದ ಒದೆಯುತ್ತಿರುವ ವಿಡಿಯೋ ವೈರಲ್ ಆಗಿದ್ದು, ನಿರ್ವಾಹಕನ ದರ್ಪದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಸ್ ಗೆ ನೇಮ್ ಬೋರ್ಡ್ ಹಾಕಿ ಎಂದು ಪ್ರಯಾಣಿಕ ಹೇಳಿದ್ದಕ್ಕೆ ಕೋಪಗೊಂಡ ನಿರ್ವಾಹಕ ಆತನ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಪ್ರಯಾಣಿಕ ಕುಡಿದು ಬಂದು ತೊಂದರೆಯುಂಟು ಮಾಡುತ್ತಿದ್ದ ಹಾಗಾಗಿ ಆತನನ್ನು ಥಳಿಸಲಾಗಿದೆ ಎಂದು ಕಂಡಕ್ಟರ್ ಆರೋಪಿಸಿದ್ದಾನೆ ಎನ್ನಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಕಂಡಕ್ಟರ್ ದರ್ಪ ವೈರಲ್ ಆಗುತ್ತಿದ್ದಂತೆ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಕಂಡಕ್ಟರ್ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...