alex Certify SHOCKING NEWS: ಜನ್ಮದಿನದ ಸಂಭ್ರಮದ ವೇಳೆ ಸಾಂಬಾರ್ ಪಾತ್ರೆಗೆ ಬಿದ್ದ ಮಗು; ದಾರುಣ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: ಜನ್ಮದಿನದ ಸಂಭ್ರಮದ ವೇಳೆ ಸಾಂಬಾರ್ ಪಾತ್ರೆಗೆ ಬಿದ್ದ ಮಗು; ದಾರುಣ ಸಾವು

ಹೈದರಾಬಾದ್: 2ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಮಗುವೊಂದು ಆಕಸ್ಮಿಕವಾಗಿ ಬಿಸಿ ಸಾಂಬಾರ್ ಪಾತ್ರೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಕಲಗಾರ ಗ್ರಾಮದಲ್ಲಿ ನಡೆದಿದೆ.

ಎರಡು ದಿನಗಳ ಹಿಂದೆ 2 ವರ್ಷದ ಮಗು ತೇಜಸ್ವಿನಿ ಹುಟ್ಟುಹಬ್ಬವಿತ್ತು. ಮಗುವಿನ ಹುಟ್ಟುಹಬ್ಬದ ಸಂಭ್ರಮಕ್ಕಾಗಿ ಭರ್ಜರಿ ತಯಾರಿ ನಡೆಸಿದ್ದ ತಂದೆ-ತಾಯಿ ಶಿವ-ಭಾನುಮತ್ ದಂಪತಿ, ಸಂಬಂಧಿಕರಿಗಾಗಿ, ಸ್ನೇಹಿತರಿಗಾಗಿ ಭರ್ಜರಿ ಊಟದ ವ್ಯವಸ್ಥೆಯನ್ನು ಮಾಡಿಸಿದ್ದರು. ಅಡುಗೆ ಮನೆಯಲ್ಲಿ ಕುರ್ಚಿ ಮೇಲೆ ಆಟವಾಡುತ್ತಿದ್ದ ತೇಜಸ್ವಿನಿ ಏಕಾಏಕಿ ಸಾಂಬಾರ್ ಪಾತ್ರೆಗೆ ಬಿದ್ದಿದ್ದಾಳೆ.

60 ವರ್ಷದ ದಿನಗೂಲಿ ನೌಕರನೀಗ ಸೂಪರ್‌ ಮಾಡೆಲ್‌….!

ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇದೀಗ ಮಗು ಕೊನೆಯುಸಿರೆಳೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...