alex Certify ಶಿವಮೊಗ್ಗ ಅನುಮಾನಾಸ್ಪದ ಬಾಕ್ಸ್ ಪ್ರಕರಣಕ್ಕೆ ಟ್ವಿಸ್ಟ್: ಇಬ್ಬರು ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಿವಮೊಗ್ಗ ಅನುಮಾನಾಸ್ಪದ ಬಾಕ್ಸ್ ಪ್ರಕರಣಕ್ಕೆ ಟ್ವಿಸ್ಟ್: ಇಬ್ಬರು ಅರೆಸ್ಟ್

ಶಿವಮೊಗ್ಗ: ರೈಲ್ವೆ ನಿಲ್ದಾಣದ ಬಳಿ ಎರಡು ಅನುಮಾನಾಸ್ಪದ ಬಾಕ್ಸ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಯನಗರ ಠಾಣೆ ಪೋಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಭದ್ರಾವತಿ ಮೂಲದ ನಜರುಲ್ಲಾ, ತಿಪಟೂರು ಮೂಲದ ಜಬಿವುಲ್ಲಾ ಬಂಧಿತ ಆರೋಪಿಗಳು. ತಿಪಟೂರು ಮೂಲದ ಗಿರೀಶ್ ದೂರು ನೀಡಿದ್ದಾರೆ. ರಿಯಲ್ ಎಸ್ಟೇಟ್ ಗೆ ಒಂದು ಕೋಟಿ ರೂಪಾಯಿ ಕೊಡಿಸುವುದಾಗಿ ಗಿರೀಶ್ ಗೆ ನಂಬಿಸಿದ್ದ ನಜರುಲ್ಲಾ 2.5 ಲಕ್ಷ ರೂಪಾಯಿ ಹಣ ವಸೂಲಿ ಮಾಡಿದ್ದ. ಹಣ ಕೊಡದೆ ಸತಾಯಿಸಿದ್ದು, ಕೊಟ್ಟ ಹಣ ವಾಪಸ್ ಕೇಳಿದಾಗ ನವೆಂಬರ್ 3ರಂದು ಶಿವಮೊಗ್ಗಕ್ಕೆ ಬರುವಂತೆ ಹೇಳಿದ್ದಾನೆ.

ರೈಲ್ವೆ ನಿಲ್ದಾಣದ ಬಳಿ ಬಾಕ್ಸ್ ನಲ್ಲಿ ಹಣ ಇಟ್ಟಿರುವುದಾಗಿ ತಿಳಿಸಿ ನಜರುಲ್ಲಾ ಸುತ್ತಮುತ್ತ ಪೊಲೀಸರು ಇರುತ್ತಾರೆ ಹುಷಾರು ಎಂದು ಹೆದರಿಸಿದ್ದಾನೆ. ಪೊಲೀಸರ ಭಯದಿಂದ ಗಿರೀಶ್ ಹಣ ಮುಟ್ಟದೆ ವಾಪಸ್ ತೆರಳಿದ್ದಾನೆ. ಅನುಮಾನಾಸ್ಪದ ಬಾಕ್ಸ್ ವಿಷಯ ಬಹಿರಂಗವಾದ ನಂತರ ದೂರು ನೀಡಿದ್ದಾನೆ. ಆರೋಪಿಗಳು ಬಾಕ್ಸ್ ಗಳಲ್ಲಿ ಹಣ ಇದೆ ಎಂದು ನಂಬಿಸಿ ವಂಚಿಸಲು ಯತ್ನಿಸಿರುವುದು ಗೊತ್ತಾಗಿದೆ. ಇಬ್ಬರನ್ನು ವಶಕ್ಕೆ ಪಡೆದು ತನಿಖೆ ಕೈಗೊಳ್ಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...