alex Certify SHOCKING: ರಸ್ತೆಯಲ್ಲೇ ಸ್ಕೂಟರ್ ಗೆ ಬೆಂಕಿ, ಸವಾರ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ರಸ್ತೆಯಲ್ಲೇ ಸ್ಕೂಟರ್ ಗೆ ಬೆಂಕಿ, ಸವಾರ ಸಾವು

ಮೈಸೂರು: ರಸ್ತೆಯಲ್ಲೇ ಸ್ಕೂಟರ್ ಗೆ ಬೆಂಕಿ ತಗುಲಿ ಸವಾರ ಸಾವನ್ನಪ್ಪಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಶ್ರೀರಂಗಪಟ್ಟಣ ತಾಲೂಕಿನ ದರಸಗುಪ್ಪೆ ಸಮೀಪ ನಡೆದಿದೆ.

ಮೈಸೂರು ಸಿದ್ಧಾರ್ಥ ನಗರದ ಶಿವರಾಮು ಮೃತಪಟ್ಟವರು ಎಂದು ಹೇಳಲಾಗಿದೆ. ಮತ್ತೊಬ್ಬ ಸವಾರ ಅನಂತರಾಮಯ್ಯ ಗಂಭೀರವಾಗಿ ಗಾಯಗೊಂಡಿದ್ದಾರೆ. ಶಿವರಾಮು ಮತ್ತು ಅನಂತರಾಮಯ್ಯ ಸ್ಕೂಟರ್ ನಲ್ಲಿ ಕೆಆರ್ ಪೇಟೆ ಕಡೆಗೆ ತೆರಳುತ್ತಿದ್ದ ವೇಳೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಬೆಂಕಿ ಇಬ್ಬರಿಗೂ ತಗುಲಿದ್ದು, ಸ್ಥಳೀಯರು ರಕ್ಷಿಸಿದ್ದಾರೆ. ಆಸ್ಪತ್ರೆಗೆ ದಾಖಲಾಗಿದ್ದ ಶಿವರಾಮು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಅನಂತರಾಮಯ್ಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...