alex Certify ಇವು ರಸ್ತೆಗೆ ಅಡ್ಡ ಬಂದರೆ ತೊಂದರೆ ತಪ್ಪಿದ್ದಲ್ಲ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇವು ರಸ್ತೆಗೆ ಅಡ್ಡ ಬಂದರೆ ತೊಂದರೆ ತಪ್ಪಿದ್ದಲ್ಲ….!

ಒಳ್ಳೆಯ ಕೆಲಸಕ್ಕೆ ಹೊರಟಾಗ ಬೆಕ್ಕು ಅಡ್ಡವಾದರೆ ಅಯ್ಯೋ ಅಪಶಕುನವಾಯ್ತು ಅಂತ ನಾವು ಹೇಳ್ತೇವೆ. ಶಕುನ ಶಾಸ್ತ್ರದ ಪ್ರಕಾರ, ಬರಿ ಬೆಕ್ಕು ಮಾತ್ರವಲ್ಲ ಇನ್ನೂ ಕೆಲವು ಪ್ರಾಣಿಗಳು ರಸ್ತೆಗೆ ಅಡ್ಡವಾದರೂ ಅಪಾಯ ಉಂಟಾಗುವ ಸಾಧ್ಯತೆ ಇದೆ.

ಹಾವು : ಶಕುನದ ಪ್ರಕಾರ ಹಾವು ರಸ್ತೆ ದಾಟಿದರೆ ಅಶುಭ. ಸಾಮಾನ್ಯವಾಗಿ ಮಳೆಯ ಸಮಯದಲ್ಲಿ ಹಾವುಗಳು ರಸ್ತೆಗೆ ಬರುತ್ತವೆ. ಹಾವು ಎಡದಿಂದ ಬಲಕ್ಕೆ ಹೋದರೆ ಶತ್ರುಗಳಿಂದ ಭಯವಿದೆ ಎಂದರ್ಥ.

ಮುಂಗುಸಿ : ಹಾವಿನ ತರಹ ಮುಂಗುಸಿ ಕೂಡ ರಸ್ತೆ ದಾಟುವುದು ಶುಭವಲ್ಲ. ಇದರಿಂದ ನಿಮ್ಮ ಕೆಲಸ ಕೆಡುತ್ತದೆ. ಹಗಲಿನಲ್ಲಿ ಮುಂಗುಸಿ ಕಾಣುವುದೇ ಅಪಶಕುನ ಎಂಬ ನಂಬಿಕೆ ಕೂಡ ಇದೆ.

ಹಂದಿ : ಯಾವುದೋ ಒಳ್ಳೆಯ ಕೆಲಸಕ್ಕೆ ಹೊರಟಾಗ ಹಂದಿ ಎಡದಿಂದ ರಸ್ತೆ ದಾಟಿ ಬಲಕ್ಕೆ ಹೋದರೆ ಅದರಿಂದ ಕೆಲಸ ಪೂರ್ತಿಯಾಗುವುದಿಲ್ಲ.

ಕಾಗೆ : ಹೊರಗಡೆ ಹೋದಾಗ ಕಾಗೆ ನಿಮ್ಮ ತಲೆಯನ್ನು ಮುಟ್ಟಿದರೆ ಇದರಿಂದ ಸಾವು ಸಂಭವಿಸಬಹುದು ಅಥವಾ ಯಾವುದೋ ಖಾಯಿಲೆ ಬರಬಹುದು.

ದನ : ರಸ್ತೆಗಳಲ್ಲಿ ಹಸುಗಳು ಮಲಗಿರುವುದು ಸಾಮಾನ್ಯ ಸಂಗತಿ. ನೀವು ಹೊರಗಡೆ ಹೊರಟಾಗ ಒಮ್ಮೆಲೇ ದನಗಳ ಹಿಂಡು ರಸ್ತೆಗೆ ಬರುವುದು ಒಳ್ಳೆಯದಲ್ಲ. ದೂರದ ಯಾತ್ರೆಗೆ ಹೋಗುವ ಸಮಯದಲ್ಲಿ ಹೀಗಾದರೆ ಯಾತ್ರೆಯ ಸಮಯದಲ್ಲಿ ಕಷ್ಟಗಳು ಎದುರಾಗಬಹುದು.

ಹಾಗಾಗಿ ಈ ಎಲ್ಲ ಪ್ರಾಣಿಗಳು ರಸ್ತೆ ದಾಟಿದ್ರೆ, ಮುಂದೆ ಹೋಗುವ ಮೊದಲು, ಸ್ವಲ್ಪ ನಿಂತು ಹೋಗಿ ಎಂದು ಹಿರಿಯರು ಹೇಳುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...