alex Certify ಈ ಕಾರಣಕ್ಕೆ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ ಸಬ್ಯಸಾಚಿಯ ಮಂಗಳಸೂತ್ರ ಜಾಹೀರಾತು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕಾರಣಕ್ಕೆ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ ಸಬ್ಯಸಾಚಿಯ ಮಂಗಳಸೂತ್ರ ಜಾಹೀರಾತು..!

ಹಿಂದೂ ಧರ್ಮದಲ್ಲಿ ಮಂಗಳಸೂತ್ರವನ್ನು ಪವಿತ್ರ ಆಭರಣ ಎಂದು ಕರೆಯಲಾಗುತ್ತೆ. ಆದರೆ ಇದೇ ಮಂಗಳಸೂತ್ರ ಜಾಹೀರಾತಿನ ವಿಚಾರವಾಗಿ ಡಿಸೈನರ್​​ ಮುಖರ್ಜಿ ಸೋಶಿಯಲ್​ ಮೀಡಿಯಾದಲ್ಲಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇಂಟಿಮೇಟ್​ ಫೈನ್​ ಜ್ಯುವೆಲ್ಲರಿ ಎಂದು ಈ ಹೊಸ ಕಲೆಕ್ಷನ್​​ಗೆ ಹೆಸರಿಡಲಾಗಿದೆ.

ಸಭ್ಯಸಾಚಿಯು ಹೊಸದಾಗಿ ಅನಾವರಣಗೊಳಿಸಿರುವ ಮಂಗಳಸೂತ್ರ ಆಭರಣಗಳನ್ನು ಧರಿಸುವ ಮಾಡೆಲ್​ಗಳ ಫೋಟೋವನ್ನು ಅಧಿಕೃತ ಇನ್​ಸ್ಟಾಗ್ರಾಂ ಖಾತೆಯಲ್ಲಿ ಸಬ್ಯಸಾಚಿ ಪೋಸ್ಟ್​ ಮಾಡಿದೆ.

ಪ್ರಚಾರದ ಜಾಹೀರಾತಿನಲ್ಲಿ ಭಿನ್ನಲಿಂಗೀಯ ಹಾಗೂ ಸಲಿಂಗಕಾಮಿ ದಂಪತಿ ರಾಯಲ್​ ಬಂಗಾಳದ ಮಂಗಳಸೂತ್ರವನ್ನು ಧರಿಸಿ ಫೋಟೋಗೆ ಪೋಸ್​ ನೀಡಿದ್ದಾರೆ. ಎದೆಯೆಲ್ಲ ಕಾಣುವಂತಹ ಧಿರಿಸನ್ನು ಧರಿಸಿ ಮಾಡೆಲ್​​ಗಳು ಮಂಗಳ ಸೂತ್ರ ಹಾಕಿದ್ದಾರೆ.

ಆದರೆ ಸಬ್ಯಸಾಚಿಯ ಈ ಜಾಹೀರಾತಿಗೆ ಇಂಟರ್ನೆಟ್​ನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ರೀತಿ ಮೈ ಮಾಟ ಕಾಣುವಂತಹ ಬಟ್ಟೆ ಧರಿಸಿದ ಮಹಿಳೆಯರ ಬಳಿ ಮಂಗಳಸೂತ್ರದ ಜಾಹೀರಾತು ನೀಡಿರೋದು ಹಿಂದೂ ಧರ್ಮಕ್ಕೆ ಮಾಡಿದ ಅಪಮಾನವಾಗಿದೆ ಎಂದು ಕಿಡಿಕಾರಿದ್ದಾರೆ.

ನೀವು ಈ ಜಾಹೀರಾತಿನ ಮೂಲಕ ಏನನ್ನು ಪ್ರಚಾರ ಮಾಡಲು ಬಯಸುತ್ತಿದ್ದೀರಿ..? ಈ ಆಭರಣವನ್ನು ಧರಿಸಲು ಇಷ್ಟು ಕೆಳಹಂತಕ್ಕೆ ಇಳಿಯಬೇಕು ಅಂದರೆ ಇದನ್ನು ಧರಿಸಲು ಯಾರೂ ಮುಂದೆ ಬರೋದಿಲ್ಲ. ನಿಮ್ಮ ಕ್ಯಾಂಪೇನ್​ಗಳ ಬಗ್ಗೆ ಎಚ್ಚರಿಕೆ ವಹಿಸಿ ಎಂದು ನೆಟ್ಟಿಗರೊಬ್ಬರು ಕಮೆಂಟ್​ ಮಾಡಿದ್ದಾರೆ.

ಆಭರಣಗಳು ಕಲೆಯ ಸುಂದರ ಭಾಗವಾಗಿದೆ. ಇದನ್ನು ನೀವು ಒಳ್ಳೆಯ ಮಾರ್ಗದ ಮೂಲಕವೇ ಪ್ರಚಾರ ಮಾಡಬಹುದಿತ್ತು ಎಂಬ ಅಭಿಪ್ರಾಯಗಳು ಕೂಡ ವ್ಯಕ್ತವಾಗಿದೆ.

ಮಂಗಳಸೂತ್ರವನ್ನು ಈ ರೀತಿಯಲ್ಲಿ ಪ್ರಚಾರ ಮಾಡುವ ನಿಮಗೆ ಬುರ್ಕಾ ಹಾಗೂ ತಬಿಜ್​ನ್ನೂ ಇದೇ ರೀತಿ ಜಾಹೀರಾತನ್ನು ಪ್ರಕಟಿಸಿ ಮಾರಾಟ ಮಾಡುವ ಧೈರ್ಯ ನಿಮಗಿದೆಯೇ ಎಂದು ನೆಟ್ಟಿಗರೊಬ್ಬರು ಸವಾಲ್​ ಎಸೆದಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...