alex Certify BIG NEWS: ದಿಢೀರ್​ ದೆಹಲಿಗೆ ಹಾರಿದ​ ಸಾಹುಕಾರ್..! ಕುತೂಹಲ ಮೂಡಿಸಿದ ರಮೇಶ್​ ಜಾರಕಿಹೊಳಿ ನಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ದಿಢೀರ್​ ದೆಹಲಿಗೆ ಹಾರಿದ​ ಸಾಹುಕಾರ್..! ಕುತೂಹಲ ಮೂಡಿಸಿದ ರಮೇಶ್​ ಜಾರಕಿಹೊಳಿ ನಡೆ

ಸಿಡಿ ಪ್ರಕರಣದ ಬಳಿಕ ಸಚಿವ ಸ್ಥಾನ ಕಳೆದುಕೊಂಡ ನಂತರ ಶಾಸಕ ಸ್ಥಾನವನ್ನೂ ತ್ಯಜಿಸುತ್ತೇನೆ ಎಂದಿದ್ದ ರಮೇಶ್​ ಜಾರಕಿಹೊಳಿ ಇದೀಗ ದಿನಕ್ಕೊಂದು ಟ್ವಿಸ್ಟ್​ ನೀಡುತ್ತಿದ್ದಾರೆ. ತಡರಾತ್ರಿಯೇ ಬೆಳಗಾವಿಯಿಂದ ಬೆಂಗಳೂರಿಗೆ ಆಗಮಿಸಿದ್ದ ರಮೇಶ್​ ಇದೀಗ ದಿಢೀರ್​ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.

ಈಗಾಗಲೇ ವಿವಿಧ ಮಠಾಧೀಶರು ಹಾಗೂ ದೇವೇಂದ್ರ ಫಡ್ನವಿಸ್​ರಂತಹ ಹಿರಿಯ ನಾಯಕರನ್ನ ಭೇಟಿ ಮಾಡಿದ್ದ ರಮೇಶ್​ ಜಾರಕಿಹೊಳಿ ಇಂದು ಸಿಎಂ ಯಡಿಯೂರಪ್ಪರನ್ನ ಭೇಟಿಯಾಗೋದಾಗಿ ಹೇಳಿದ್ದರು. ಇದಕ್ಕಾಗಿ 2 ದಿನಗಳ ಬೆಂಗಳೂರು ಪ್ರವಾಸವನ್ನೂ ಕೈಗೊಂಡಿದ್ದರು.

ಆದರೆ ಇದೀಗ ಮಾಧ್ಯಮದ ಕಣ್ತಪ್ಪಿಸಿ ನೇರವಾಗಿ ಏರ್​ ಪೋರ್ಟ್​ಗೆ ತೆರಳಿದ ರಮೇಶ್‌ ಜಾರಕಿಹೊಳಿ ಅಲ್ಲಿಂದ ದೆಹಲಿಗೆ ಹಾರಿದ್ದಾರೆ ಎನ್ನಲಾಗಿದೆ.

ಸಿಡಿ ಪ್ರಕರಣದ ಬಳಿಕ ರಮೇಶ್​​ ಜಾರಕಿಹೊಳಿ ಕೈಯಿಂದ ಸಚಿವ ಸ್ಥಾನ ತಪ್ಪಿ ಹೋಗಿತ್ತು. ಇದಾದ ಬಳಿಕ ತೀರಾ ಇತ್ತೀಚೆಗೆ ಶಾಸಕ ಸ್ಥಾನಕ್ಕೂ ರಾಜೀನಾಮೆ ಕೋಡೋದಾಗಿ ರಮೇಶ್​ ಹೇಳಿದ್ದರು.

ಆದರೆ ಸಹೋದರರ ಸಲಹೆಯನ್ನ ಕೇಳಿ ಈ ನಿರ್ಧಾರದಿಂದ ಹಿಂದೆ ಸರಿದಿದ್ದ ರಮೇಶ್,​ ಯಡಿಯೂರಪ್ಪರ ಭೇಟಿಗೆ ಮುಂದಾಗಿದ್ದರು. ಇದೀಗ ದಿಢೀರ್​ ಬೆಳವಣಿಗೆ ಎಂಬಂತೆ 11:45ರ ಸುಮಾರಿಗೆ ದೆಹಲಿಗೆ ರಮೇಶ್ ಜಾರಕಿಹೊಳಿ​ ತೆರಳಿದ್ದು ಹೈಕಮಾಂಡ್​ ಜೊತೆ ಮಾತುಕತೆಗೆ ಮುಂದಾಗ್ತಾರೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...