alex Certify 90 ಸಾವಿರ ರೂ. ಲಂಚ ಕೊಡಲು ಬಂದ ಗುತ್ತಿಗೆದಾರನ ಹಿಡಿದು ಕೊಟ್ಟ ಅಧಿಕಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

90 ಸಾವಿರ ರೂ. ಲಂಚ ಕೊಡಲು ಬಂದ ಗುತ್ತಿಗೆದಾರನ ಹಿಡಿದು ಕೊಟ್ಟ ಅಧಿಕಾರಿ

ಹಾವೇರಿ: ಲಂಚ ಕೊಡುವ ಆಮಿಷ ಒಡ್ಡಿದ ಗುತ್ತಿಗೆದಾರನನ್ನು ಸರ್ಕಾರಿ ಅಧಿಕಾರಿ ಲೋಕಾಯುಕ್ತ ಪೊಲೀಸರಿಗೆ ಒಪ್ಪಿಸಿದ ಘಟನೆ ಗುರುವಾರ ನಡೆದಿದೆ.

ಹಾವೇರಿ ತಾಲೂಕಿನ ಗುತ್ತಲಾದ ಗುರುಕೃಪ ಎಂಟರ್ ಪ್ರೈಸಸ್ ಮಾಲೀಕ ಶರಣಪ್ಪ ಸಿದ್ದಪ್ಪ ಶೆಟ್ಟರ್ ಬಂಧಿತ ಟೆಂಡರ್ ದಾರ. ಹಾವೇರಿ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಭರತ್ ಹೆಗಡೆ ಲಂಚದ ಆಮಿಷ ಒಡ್ಡಿದ ಶರಣಪ್ಪ ವಿರುದ್ಧ ದೂರು ನೀಡಿ ಲೋಕಾಯುಕ್ತ ಪೊಲೀಸರಿಗೆ ಒಪ್ಪಿಸಿದ್ದಾರೆ.

ಹಾವೇರಿ ತಾಲೂಕು ಪಂಚಾಯಿತಿಯಿಂದ ಸಾಮಗ್ರಿ ಪೂರೈಕೆಗೆ ಕರೆದ ಟೆಂಡರ್ ನನಗೆ ಸಿಗುವಂತೆ ಮಾಡಿದಲ್ಲಿ ಟೆಂಡರ್ ಮೊತ್ತದ ಶೇಕಡ 20ರಷ್ಟು ಹಣ ನಿಮಗೆ ಕೊಡುತ್ತೇನೆ ಎಂದು ಲಂಚ ತೆಗೆದುಕೊಳ್ಳಲು ಆಮಿಷ ಒಡ್ಡಿದ್ದು, ಲೋಕಾಯುಕ್ತರಿಗೆ ಭರತ್ ಹೆಗಡೆ ದೂರು ನೀಡಿದ್ದರು. ಹಾವೇರಿಯ ಹೋಟೆಲ್ ನಲ್ಲಿ 90,000 ರೂ. ಲಂಚ ಕೊಡುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...