alex Certify ಆರ್ಯನ್​ ಬಂಧನದ ವೇಳೆ ಹಾಜರಿದ್ರಾ ಬಿಜೆಪಿ ನಾಯಕ..?‌ ಶಾರೂಕ್‌ ಪುತ್ರನ ಡ್ರಗ್ಸ್‌ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರ್ಯನ್​ ಬಂಧನದ ವೇಳೆ ಹಾಜರಿದ್ರಾ ಬಿಜೆಪಿ ನಾಯಕ..?‌ ಶಾರೂಕ್‌ ಪುತ್ರನ ಡ್ರಗ್ಸ್‌ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್

ಬಿಜೆಪಿ ನಾಯಕ ಹಾಗೂ ಖಾಸಗಿ ತನಿಖಾಧಿಕಾರಿ ಮುಂಬೈನ ಮಾದಕ ವಸ್ತು ನಿಗ್ರಹ ದಳ ಕಚೇರಿಗೆ ಪ್ರವೇಶಿಸಿ ಹೊರಬಂದ ವಿಡಿಯೋವನ್ನು ಎನ್​ಸಿಪಿ ವಕ್ತಾರ ನವಾಬ್​ ಮಲ್ಲಿಕ್​ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಇವರಿಬ್ಬರು ಶಾರೂಕ್​ ಖಾನ್​ ಪುತ್ರ ಆರ್ಯನ್​ ಖಾನ್​​ ಬಂಧನಕ್ಕೊಳಗಾದ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ನವಾಬ್​ ಮಲ್ಲಿಕ್​, ಎನ್​ಸಿಬಿ ಕಚೇರಿ ಪ್ರವೇಶಿಸಿದ ಇಬ್ಬರನ್ನು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಮನೀಷ್​ ಭಾನುಶಾಲಿ ಹಾಗೂ ಖಾಸಗಿ ತನಿಖಾಧಿಕಾರಿ ಕೆ.ಪಿ. ಗೋಸಾವಿ ಎಂದು ಗುರುತಿಸಿದ್ದಾರೆ. ಎರಡೂ ವಿಡಿಯೋಗಳನ್ನು ಬಹಿರಂಗಪಡಿಸಿರುವ ನವಾಬ್​ ಮಲ್ಲಿಕ್​ ಈ ವಿಡಿಯೋಗಳನ್ನು ರಾತ್ರಿ ನಡೆದ ದಾಳಿಯ ಸಮಯದಲ್ಲಿ ಚಿತ್ರೀಕರಿಸಲಾಗಿದೆ ಎಂದು ಹೇಳಿದ್ದಾರೆ.

ಭಾನುಶಾಲಿ ಪ್ರಧಾನಿ ಮೋದಿ ಹಾಗೂ ಕೇಂದ್ರ ಸಚಿವ ಅಮಿತ್​ ಶಾ ಜೊತೆ ಇರುವ ಫೋಟೋವನ್ನೂ ಮಲ್ಲಿಕ್​ ಸುದ್ದಿಗೋಷ್ಠಿಯಲ್ಲಿ ತೋರಿಸಿದ್ದಾರೆ. ಎನ್​ಸಿಬಿ ಕಚೇರಿಯಲ್ಲಿ ಆರ್ಯನ್​ ಖಾನ್​ ಜೊತೆ ಗೋಸಾವಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು. ಗೋಸಾವಿ ನಮ್ಮ ಸಿಬ್ಬಂದಿಯಲ್ಲ ಎಂದು ಫೋಟೋ ವೈರಲ್​ ಬಳಿಕ ಎನ್​ಸಿಬಿ ಸ್ಪಷ್ಟನೆ ನೀಡಿತ್ತು.

— Nawab Malik نواب ملک नवाब मलिक (@nawabmalikncp) October 6, 2021

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...