alex Certify ONLINE ವಂಚನೆಯಿಂದ ಹಣ ಕಳೆದುಕೊಂಡವರಿಗೆ ನೆಮ್ಮದಿ ನೀಡುತ್ತೆ ಈ ಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ONLINE ವಂಚನೆಯಿಂದ ಹಣ ಕಳೆದುಕೊಂಡವರಿಗೆ ನೆಮ್ಮದಿ ನೀಡುತ್ತೆ ಈ ಸುದ್ದಿ

ಮುಂಬೈನ ಅಂಧೇರಿ ಉದ್ಯಮಿಯ ತಂದೆ 78 ವರ್ಷದ ವ್ಯಕ್ತಿ ಆನ್​ಲೈನ್​ ವಂಚನೆ ಮೂಲಕ 50 ಸಾವಿರ ರೂಪಾಯಿ ಕಳೆದುಕೊಂಡ ಬಳಿಕ ಖಿನ್ನತೆಗೆ ಒಳಗಾಗಿ ಸಾವನ್ನಪ್ಪಿದ್ದರು. ಇವರ ತಂದೆ ಈ ಘಟನೆ ಬಳಿಕ ಬರೋಬ್ಬರಿ 7 ತಿಂಗಳುಗಳ ಕಾಲ ಖಿನ್ನತೆಗೆ ಒಳಗಾಗಿದ್ದು ಆ ಬಳಿಕ ಸಾವನ್ನಪ್ಪಿದ್ದರು.

ಆದರೆ ಇದೀಗ ಬುಧವಾರ ಈ ಹಣ ವಾಪಸ್​ ಖಾತೆಗೆ ಜಮೆ ಆಗಿದ್ದು ಮೃತ ವ್ಯಕ್ತಿಯ ಪುತ್ರ ಶಾಕ್​ ಆಗಿದ್ದಾರೆ. ಬಳಿಕ ಮುಂಬೈ ಪೊಲೀಸರ ಸತತ ಶ್ರಮದ ಬಳಿಕ ಈ ಹಣ ವಾಪಸ್​ ಸಿಕ್ಕಿದೆ ಎಂದು ತಿಳಿದುಬಂದಿದೆ.

2019 ಡಿಸೆಂಬರ್​​ನಲ್ಲಿ ನಿವೃತ್ತ ಬ್ಯಾಂಕ್​ ವ್ಯವಸ್ಥಾಪಕ ಸತ್ಪಾಲ್​ ಜಗ್ಗಿ ಎಂಬವರಿಗೆ ಬ್ಯಾಂಕ್​ ಟೆಲಿಕಾಲರ್​​ ಎಂದು ಹೇಳಿಕೊಂಡು ಅಪರಿಚಿತರೊಬ್ಬರು ಕರೆ ಮಾಡಿದ್ದರು. ಕೆವೈಸಿಯನ್ನ ನವೀಕರಿಸದ ಕಾರಣ ನಿಮ್ಮ ಕ್ರೆಡಿಟ್​ ಕಾರ್ಡ್​ನ್ನು ನಿರ್ಬಂಧಿಸುತ್ತಿದ್ದೇವೆ ಎಂದು ವಾರ್ನಿಂಗ್​ ನೀಡಿದ್ದಾರೆ.

ಇದರಿಂದ ಬೆದರಿದ ಸತ್ಪಾಲ್​ ತಮ್ಮ ಬ್ಯಾಂಕ್​ ವಿವರವನ್ನ ನೀಡಿದ್ದಾರೆ. ಇದಾದ ಕೆಲವೇ ನಿಮಿಷಗಳಲ್ಲಿ ಕ್ರೆಡಿಟ್​ ಕಾರ್ಡ್​ನಿಂದ 49999 ರೂಪಾಯಿಗಳನ್ನ ಕಟ್​ ಮಾಡಿಕೊಳ್ಳಲಾಯ್ತು. ಬಳಿಕ ಮತ್ತೆ 9999ನ್ನು ತೆಗೆದುಕೊಳ್ಳಲಾಯ್ತು. ಇದಾದ ಬಳಿಕ ಸತ್ಪಾಲ್​ ಖಿನ್ನತೆಗೆ ಒಳಗಾಗಿದ್ದರು ಹಾಗೂ ಜುಲೈ 2020ರಲ್ಲಿ ನಿಧನರಾದರು. ಈ ಪ್ರಕರಣವನ್ನ ಕೈಗೆತ್ತಿಕೊಂಡಿದ್ದ ಪೊಲೀಸರು ಕೊನೆಗೂ ಹಣವನ್ನ ವಾಪಸ್​ ಮಾಡಿಸಿಕೊಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...