alex Certify Shocking: ನಾಯಿಯ ಎರಡೂ ಕಿವಿ ಕತ್ತರಿಸಿ ವಿಕೃತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Shocking: ನಾಯಿಯ ಎರಡೂ ಕಿವಿ ಕತ್ತರಿಸಿ ವಿಕೃತಿ

ಪ್ರಾಣಿಗಳ ಮೇಲಿನ ಕ್ರೌರ್ಯ ಪ್ರಕರಣಗಳು ಹೆಚ್ಚುತ್ತಿವೆ, ಅದರಲ್ಲೂ ಬೀದಿ ನಾಯಿಗಳು ಇದಕ್ಕೆ ಬಲಿಯಾಗುತ್ತಿವೆ. ದೆಹಲಿ, ಉತ್ತರ ಪ್ರದೇಶದ ಗಾಜಿಯಾಬಾದ್ ಅಥವಾ ಮಧ್ಯಪ್ರದೇಶದ ಇಂದೋರ್ ಆಗಿರಲಿ, ನಾಯಿಗಳ ಮೇಲಿನ ಕ್ರೌರ್ಯದ ಆಘಾತಕಾರಿ ಪ್ರಕರಣಗಳು ಜನರನ್ನು ಬೆಚ್ಚಿಬೀಳಿಸಿವೆ.

ಇದೀಗ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಾಯಿಯನ್ನು ಜೀವಂತವಾಗಿ ಕೊಂದ ಘಟನೆಯ ನಂತರ, ಇಂದೋರ್‌ನಲ್ಲಿ ನಾಯಿಮರಿಯ ಕಿವಿಯನ್ನು ಕತ್ತರಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಘಟನೆಯು ಪ್ರಾಣಿ ಪ್ರಿಯರು ಮತ್ತು ಕಲ್ಯಾಣ ಸಂಸ್ಥೆಗಳನ್ನು ತಲ್ಲಣಗೊಳಿಸಿದೆ.

ಇಂದೋರ್‌ನ ಚಂದನ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಹೊಸ ವರ್ಷದ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ನಾಯಿಮರಿಯ ಎರಡೂ ಕಿವಿಗಳನ್ನು ಕತ್ತರಿಸಿದ್ದಾನೆ. ನಾಯಿ ಮರಿ ನೋವಿನಿಂದ ಚೀರಾಡುತ್ತಲಿತ್ತು. ವಿಷಯ ತಿಳಿದ ಪ್ರಾಣಿ ಪ್ರಿಯರು ಸ್ಥಳಕ್ಕೆ ತೆರಳಿ ನಾಯಿಮರಿಗೆ ಚಿಕಿತ್ಸೆ ನೀಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಆರೋಪಿಯ ಹೆಸರು ಪಪ್ಪು ಸಾಹು. ವಿಷಯ ತಿಳಿದ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಈ ನಾಯಿ ಮರಿಯನ್ನು ಸಾಕುವಂತೆ ಆರೋಪಿಗೆ ಹೇಳಿದ್ದಾರೆ. ಚಿಕಿತ್ಸೆ ನೀಡಿ ಸಾಕಬೇಕು ಎಂದು ಶಿಕ್ಷೆಯ ರೂಪದಲ್ಲಿ ಪ್ರಕಟಿಸಲಾಗಿದ್ದು, ಪ್ರಕರಣದ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...