alex Certify SHOCKING: ವಾಹನದಿಂದ ಡಿಕ್ಕಿ ಹೊಡೆಸಿ ತಾಯಿಯನ್ನೇ ಕೊಂದ ಪುತ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ವಾಹನದಿಂದ ಡಿಕ್ಕಿ ಹೊಡೆಸಿ ತಾಯಿಯನ್ನೇ ಕೊಂದ ಪುತ್ರ

ಮೈಸೂರು: ಸಾಲ ಪಾವತಿಸುವಂತೆ ಹೇಳಿದ್ದಕ್ಕೆ ತೂಫಾನ್ ವಾಹನದಿಂದ ಡಿಕ್ಕಿ ಹೊಡೆಸಿ ಮಗನೇ ತಾಯಿಯನ್ನು ಕೊಂದ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕು ಬೆಟ್ಟದಪುರ ಸಮೀಪದ ಸೂಳೆಕೋಟೆ ಗ್ರಾಮದಲ್ಲಿ ನಡೆದಿದೆ.

ನಾಗಮ್ಮ ಕೊಲೆಯಾದವರು. ಹೇಮರಾಜ್ ತಾಯಿಯನ್ನು ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ನಾಗಮ್ಮ ಅವರು ತಮ್ಮ ಹೆಸರಿನಲ್ಲಿ ಸಾಲ ಮಾಡಿ ಪುತ್ರನಿಗೆ ವಾಹನ ಕೊಡಿಸಿದ್ದರು. ಹೇಮರಾಜ್ ಸರಿಯಾಗಿ ಸಾಲದ ಕಂತು ಪಾವತಿಸುತ್ತಿರಲಿಲ್ಲ.

ಕಳೆದ ಒಂದೂವರೆ ವರ್ಷದಿಂದ ಕಂತುಗಳನ್ನು ಪಾವತಿಸದ ಹಿನ್ನೆಲೆಯಲ್ಲಿ ನಾಗಮ್ಮನವರಿಗೆ ಸಾಲದ ಕಂತು ಕಟ್ಟುವಂತೆ ಖಾಸಗಿ ಫೈನಾನ್ಸ್ ನವರು ಒತ್ತಾಯ ಮಾಡಿದ್ದಾರೆ. ಮಗನಿಗೆ ಸಾಲದ ಕಂತು ಪಾವತಿಸುವಂತೆ ನಾಗಮ್ಮ ಹಲವು ಬಾರಿ ತಿಳಿಸಿದ್ದಾರೆ. ಆದರೂ ಆತ ಕಟ್ಟಿರಲಿಲ್ಲ.

ಸಾಲ ಕಟ್ಟುವವರೆಗೆ ವಾಹನ ತೆಗೆದುಕೊಂಡು ಹೋಗದಂತೆ ನಾಗಮ್ಮ ವಾಹನಕ್ಕೆ ಅಡ್ಡ ನಿಂತಿದ್ದಾರೆ. ಈ ವೇಳೆ ಸಿಟ್ಟಾದ ಹೇಮರಾಜ್ ಅದೇ ವಾಹನದಿಂದ ಡಿಕ್ಕಿ ಹೊಡೆಸಿ ಪರಾರಿಯಾಗಿದ್ದಾರೆ. ವಾಹನ ಹರಿದು ಸ್ಥಳದಲ್ಲೇ ನಾಗಮ್ಮ ಮೃತಪಟ್ಟಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...