alex Certify ರೈತರಿಗೆ ಶುಭ ಸುದ್ದಿ: ಜೂನ್ 2ನೇ ವಾರದೊಳಗೆ ರಾಜ್ಯಕ್ಕೆ ಮುಂಗಾರು: ಈ ಬಾರಿ ಉತ್ತಮ ಮಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರಿಗೆ ಶುಭ ಸುದ್ದಿ: ಜೂನ್ 2ನೇ ವಾರದೊಳಗೆ ರಾಜ್ಯಕ್ಕೆ ಮುಂಗಾರು: ಈ ಬಾರಿ ಉತ್ತಮ ಮಳೆ

ಬೆಂಗಳೂರು: ರೈತರಿಗೆ ಶುಭ ಸುದ್ದಿ ಇಲ್ಲಿದೆ. ರಾಜ್ಯದಲ್ಲಿ ಈ ಬಾರಿ ವಾಡಿಕೆಯ ಮಳೆಯಾಗಲಿದೆ. ಜೂನ್ ಎರಡನೇ ವಾರದೊಳಗೆ ರಾಜ್ಯಕ್ಕೆ ಮುಂಗಾರು ಪ್ರವೇಶಿಸಲಿದೆ. ಮೋಖಾ ಚಂಡಮಾರುತದಿಂದ ಪೂರಕ ವಾತಾವರಣ ಸೃಷ್ಟಿಯಾಗುತ್ತಿದೆ.

ಬಂಗಾಳ ಕೊಲ್ಲಿಯಲ್ಲಿ ಕೆಲದಿನಗಳ ಹಿಂದೆ ರಚನೆಯಾದ ಮೋಖಾ ಚಂಡ ಮಾರುತದಿಂದ ಮುಂಗಾರು ಆರಂಭಕ್ಕೆ ಉತ್ತಮ ವಾತಾವರಣ ನಿರ್ಮಾಣಗೊಳ್ಳುವಾಗುತ್ತಿದೆ. ನಿರೀಕ್ಷೆಯಂತೆ ಈ ಬಾರಿ ಉತ್ತಮ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಜೂನ್ ನಿಂದ ಮುಂಗಾರು ಆರಂಭವಾಗಲಿದೆ. ಮುಂಗಾರಿನಲ್ಲಿ ಶೇಕಡ 70ರಿಂದ 80ರಷ್ಟು ಮುಂಗಾರು ಮಳೆಯಾಗಲಿದ್ದು, ಕಳೆದ ಮೂರು ವರ್ಷಗಳಿಂದ ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ. ಈ ಬಾರಿಯೂ ಉತ್ತಮ ಮಳೆ ಆಗಲಿದೆ. ಈ ಬಾರಿ 90ರಷ್ಟು ಮಳೆಯಾಗಲಿದ್ದು, ಜೂನ್ ಮೊದಲ ವಾರ ಕೇರಳಕ್ಕೆ ಮುಂಗಾರು ಪ್ರವೇಶಿಸಲಿದೆ. ನಂತರದ ನಾಲ್ಕು ದಿನಗಳಲ್ಲಿ ರಾಜ್ಯಕ್ಕೆ ಮುಂಗಾರು ಆಗಮನವಾಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...