alex Certify ಮಹಾಶಿವರಾತ್ರಿ ದಿನ ಈ ಗಿಡ ಮನೆಗೆ ತಂದ್ರೆ ದೂರವಾದಂತೆ ನಿಮ್ಮೆಲ್ಲ ಕಷ್ಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಾಶಿವರಾತ್ರಿ ದಿನ ಈ ಗಿಡ ಮನೆಗೆ ತಂದ್ರೆ ದೂರವಾದಂತೆ ನಿಮ್ಮೆಲ್ಲ ಕಷ್ಟ

ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ದಶಿಯ ಮಧ್ಯರಾತ್ರಿ ಶಿವನು ನಿರಾಕಾರದಿಂದ ಭೌತಿಕ ರೂಪಕ್ಕೆ ಬಂದನು ಎನ್ನುವ ನಂಬಿಕೆ ಇದೆ. ಹಾಗಾಗಿ ಈ ದಿನವನ್ನು ಮಹಾಶಿವರಾತ್ರಿಯಾಗಿ ಆಚರಣೆ ಮಾಡಲಾಗುತ್ತದೆ. ಈ ಬಾರಿ ಮಾರ್ಚ್  8 ರಂದು ಶಿವರಾತ್ರಿ ಆಚರಣೆ ಮಾಡಲಾಗ್ತಿದೆ. ಉಪವಾಸ, ಜಾಗರಣೆ, ಶಿವನಿಗೆ ವಿಶೇಷ ಅಭಿಷೇಕದ ಜೊತೆ ಮಹಾಶಿವರಾತ್ರಿ ದಿನ ಮನೆಗೆ ಕೆಲವು ಗಿಡಗಳನ್ನು ತಂದು ಬೆಳೆಸಿದ್ರೆ ಶುಭ ಎಂದು ಹೇಳಲಾಗುತ್ತದೆ. ಆ ಗಿಡಗಳಿಂದ ಮನೆಯಲ್ಲಿ ಸಂತೋಷ, ಸಮೃದ್ಧಿ ಸದಾ ನೆಲೆಸಿರುತ್ತದೆ.

ಮಹಾಶಿವರಾತ್ರಿ ದಿನ ಮನೆಗೆ ತರಬೇಕಾದ ಗಿಡ :

 ಶಮಿ ಗಿಡ : ಮಹಾಶಿವರಾತ್ರಿಯಂದು ಶಮಿ ಗಿಡವನ್ನು ಮನೆಗೆ ತನ್ನಿ. ಇದು ಶನಿ ಮತ್ತು ಈಶ್ವರ ಇಬ್ಬರಿಗೂ ಪ್ರಿಯವಾದ ಗಿಡವಾಗಿದೆ. ಮನೆಯಲ್ಲಿ ಇದನ್ನು ಬೆಳೆಸೋದ್ರಿಂದ ವ್ಯಾಪಾರ ಮತ್ತು ವೃತ್ತಿಜೀವನದಲ್ಲಿ ಪ್ರಗತಿ ಕಾಣಬಹುದು. ಈ ದಿನ  ಶಿವಲಿಂಗಕ್ಕೆ  ಶಮಿ ಎಲೆಗಳನ್ನು ಅರ್ಪಿಸಿದ್ರೆ ಶನಿ ದೋಷ ನಿವಾರಣೆಯಾಗುತ್ತದೆ.

ಬಿಲ್ವಪತ್ರೆ ಗಿಡ : ಶಿವನಿಗೆ ಅತ್ಯಂತ ಪ್ರಿಯವಾದ ಗಿಡ ಇದು. ಶಿವನ ಭಕ್ತರು ಬಿಲ್ವಪತ್ರೆಯನ್ನು ಶಿವಲಿಂಗಕ್ಕೆ ಅರ್ಪಿಸುತ್ತಾರೆ. ಶಿವರಾತ್ರಿ ದಿನ ಈ ಗಿಡವನ್ನು ಮನೆಗೆ ತರುವುದರಿಂದ ಆರ್ಥಿಕ ಮುಗ್ಗಟ್ಟು ದೂರವಾಗುತ್ತದೆ. ಈಶ್ವರನ ಕೃಪೆ ಸದಾ ನಿಮ್ಮ ಮೇಲಿರುತ್ತದೆ.

ಧಾತುರ : ಸಮುದ್ರ ಮಂಥನದ ವೇಳೆ ಶಿವ ವಿಷ ಕುಡಿದಾಗ, ಆತನ ತಲೆ ಮೇಲೆ ಧಾತುರ ಎಲೆಗಳನ್ನು ಇಡಲಾಗಿತ್ತು. ಹಾಗಾಗಿಯೇ ಶಿವನಿಗೆ ಇದು ಪ್ರಿಯವಾದ ಗಿಡ. ಮಹಾಶಿವರಾತ್ರಿ ದಿನ ನೀವು ಧಾತುರ ಗಿಡವನ್ನು ಮನೆಯಲ್ಲಿ ನೆಟ್ಟರೆ ಸಂತೋಷ ನೆಲೆಸುತ್ತದೆ. ಪಿತೃದೋಷ ನಿವಾರಣೆಯಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...