alex Certify ಕೊರೋನಾ ಗೆದ್ದು ಮನೆಗೆ ಬಂದವನಿಗೆ ಖುಲಾಯಿಸಿದ ಅದೃಷ್ಟ: ಬರೋಬ್ಬರಿ 5 ಕೋಟಿ ರೂ. ಬಹುಮಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೋನಾ ಗೆದ್ದು ಮನೆಗೆ ಬಂದವನಿಗೆ ಖುಲಾಯಿಸಿದ ಅದೃಷ್ಟ: ಬರೋಬ್ಬರಿ 5 ಕೋಟಿ ರೂ. ಬಹುಮಾನ

ಥಾಣೆ: ಕೊರೋನಾ ಸೋಂಕಿನಿಂದ ಗುಣಮುಖನಾದ ವ್ಯಕ್ತಿಯೊಬ್ಬರಿಗೆ ಲಾಟರಿಯಲ್ಲಿ ಬರೋಬ್ಬರಿ 5 ಕೋಟಿ ರೂಪಾಯಿ ಬಹುಮಾನ ಬಂದಿದೆ.

ಮಹಾರಾಷ್ಟ್ರದ ಥಾಣೆ ದಿವಾ ನಿವಾಸಿ ರಾಜಕಾಂತ್ ಪಾಟೀಲ್ ಅವರಿಗೆ 5 ಕೋಟಿ ರೂಪಾಯಿ ಬಹುಮಾನ ಬಂದಿದೆ. ಉದ್ಯಮಿಯಾಗಿರುವ ರಾಜಕಾಂತ್ ಪಾಟೀಲ್ ಅವರಿಗೆ ಕೆಲ ದಿನಗಳ ಹಿಂದೆ ಕೋವಿಡ್ ಪಾಸಿಟಿವ್ ವರದಿ ಬಂದಿದ್ದು, ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ಮರಳಿದ್ದಾರೆ.

ಇದೇ ಸಂದರ್ಭದಲ್ಲಿ 5 ಕೋಟಿ ರೂಪಾಯಿ ಬಹುಮಾನ ಬಂದಿರುವುದಾಗಿ ಸಂದೇಶ ಬಂದಿದೆ. ಆಗಷ್ಟೇ ಮನೆಗೆ ಬಂದು ಮೊಬೈಲ್ ನೋಡಿದ ಅವರಿಗೆ ಲಾಟರಿಯಲ್ಲಿ ಬಹುಮಾನ ಬಂದಿರುವ ಸಂದೇಶ ಬಂದಿರುವುದು ಗೊತ್ತಾಗಿದೆ.

ಕಂಪನಿಯವರು ಕರೆ ಮಾಡಿ ಈ ಬಗ್ಗೆ ಮಾಹಿತಿ ನೀಡಿದ್ದು, ಬಹುಮಾನ ಬಂದಿರುವ ಬಗ್ಗೆ ತಿಳಿಸಿದ್ದಾರೆ. ರಾಜಕಾಂತ್ ಪಾಟೀಲ್ ಕೆಲವು ದಿನಗಳ ಹಿಂದೆ ಪಂಜಾಬ್ ಸ್ಟೇಟ್ ಲಾಟರಿ ಟಿಕೆಟ್ ಖರೀದಿಸಿದ್ದು ಅವರು ಖರೀದಿಸಿದ ಟಿಕೆಟ್ ಗೆ 5 ಕೋಟಿ ರೂಪಾಯಿ ಬಹುಮಾನ ಬಂದಿದೆ. ತಮಗೆ ಬಂದ ಲಾಟರಿ ಹಣದ ಒಂದು ಭಾಗವನ್ನು ಕೊರೋನಾ ಸೋಂಕಿತರ ಚಿಕಿತ್ಸೆಗೆ ಬಳಕೆ ಮಾಡಲು ಪಾಟೀಲ್ ಮುಂದಾಗಿದ್ದು, ಇದಕ್ಕಾಗಿ ಸಚಿವ ಏಕನಾಥ್ ಶಿಂಧೆ ಅವರ ಸಲಹೆ ಪಡೆಯುವುದಾಗಿ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...