alex Certify BIG NEWS: ಒಮಾನ್ ಬೀಚಿನಲ್ಲಿ ಸಮುದ್ರದಲೆಗೆ ಕೊಚ್ಚಿ ಹೋದ ಅಪ್ಪ – ಮಗ; ಬೆಚ್ಚಿ ಬೀಳಿಸುವ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಒಮಾನ್ ಬೀಚಿನಲ್ಲಿ ಸಮುದ್ರದಲೆಗೆ ಕೊಚ್ಚಿ ಹೋದ ಅಪ್ಪ – ಮಗ; ಬೆಚ್ಚಿ ಬೀಳಿಸುವ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ

ಕುಟುಂಬದೊಂದಿಗೆ ರಜೆಯ ಮಜವನ್ನು ಅನುಭವಿಸಲು ಕಡಲ ಕಿನಾರೆಗೆ ಹೋಗಿ ರಕ್ಕಸ ಗಾತ್ರದ ಅಲೆಗೆ ಸಿಕ್ಕಿ ಮಹಾರಾಷ್ಟ್ರದ ವ್ಯಕ್ತಿ ಮತ್ತು ಆತನ ಪುತ್ರ ಸಾವನ್ನಪ್ಪಿದ್ದು, ಇತರೆ ಎಂಟು ಜನರು ಕಣ್ಮರೆಯಾಗಿರುವ ಘಟನೆ ಒಮನ್ ನಲ್ಲಿ ನಡೆದಿದೆ.

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಶಶಿಕಾಂತ್ ಮಹಾಮನೆ ಮತ್ತು ಅವರ ಆರು ವರ್ಷದ ಪುತ್ರ ಶ್ರೇಯಸ್ ಮೃತಪಟ್ಟಿರುವ ದುರ್ದೈವಿಗಳು. ಇವರಿಬ್ಬರೊಂದಿಗೆ ಎಂಟು ಜನರು ಒಮನ್ ಗೆ ಪ್ರವಾಸ ಹೋಗಿದ್ದರು. ಅರೇಬಿಯನ್ ಗಲ್ಫ್ ಸಮುದ್ರ ಕಿನಾರೆಯಲ್ಲಿ ಆಟವಾಡಿಕೊಂಡಿದ್ದ ಶಶಿಕಾಂತ್ ಮತ್ತು ಶ್ರೇಯಸ್ ಮತ್ತಿಬ್ಬರು ಅಪಾಯದ ರೇಖೆಯನ್ನು ಲೆಕ್ಕಿಸದೇ ಸಮುದ್ರಕ್ಕೆ ಇಳಿದಿದ್ದಾರೆ.

ಆ ಸಂದರ್ಭದಲ್ಲಿ ರಕ್ಕಸ ಗಾತ್ರದ ಅಲೆ ಬಂದು ಅದರಲ್ಲಿ ಶಶಿಕಾಂತ್ ಮತ್ತು ಶ್ರೇಯಸ್ ಕೊಚ್ಚಿ ಹೋಗಿ ಸಾವನ್ನಪ್ಪಿದ್ದಾರೆ. ಉಳಿದವರು ಕಣ್ಮರೆಯಾಗಿದ್ದಾರೆ ಎಂದು ವರದಿಯಾಗಿದೆ.

ದಡದಲ್ಲಿದ್ದ ಕೆಲವರು ಈ ದುರಂತದ ದೃಶ್ಯಗಳನ್ನು ವಿಡಿಯೋ ಮಾಡಿದ್ದಾರೆ.

ಈ ಘಟನೆಯಲ್ಲಿ ಮಹಾಮನೆಯ ಪುತ್ರಿ ಶ್ರೇಯಾ ಸೇರಿದಂತೆ ಎಂಟು ಮಂದಿ ಕಣ್ಮರೆಯಾಗಿದ್ದಾರೆ ಎಂದು ತಿಳಿದುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...