alex Certify ಹಸು ಕದ್ದು ಸಿಕ್ಕಿಬಿದ್ದವನ ಮೀಸೆ ಬೋಳಿಸಿ ಮೆರವಣಿಗೆ ಮಾಡಿದ ಗ್ರಾಮಸ್ಥರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಸು ಕದ್ದು ಸಿಕ್ಕಿಬಿದ್ದವನ ಮೀಸೆ ಬೋಳಿಸಿ ಮೆರವಣಿಗೆ ಮಾಡಿದ ಗ್ರಾಮಸ್ಥರು

ಹಸುವನ್ನು ಕದ್ದ ಎಂಬ ಆರೋಪದಲ್ಲಿ ವ್ಯಕ್ತಿಯೊಬ್ಬನ ಅರ್ಧ ಮೀಸೆ ಬೋಳಿಸಿ, ಅರ್ಧ ತಲೆ ಬೋಳಿಸಿದ ಘಟನೆ ಮಧ್ಯ ಪ್ರದೇಶದ ದಾಮೋ ಜಿಲ್ಲೆಯಲ್ಲಿ ಘಟಿಸಿದೆ. ಇಲ್ಲಿನ ಮರುತಾಲ್ ಗ್ರಾಮಸ್ಥರು ಹೀಗೊಂದು ಶಿಕ್ಷೆ ಕೊಟ್ಟಿದ್ದಾರೆ.

“ಈ ವ್ಯಕ್ತಿ ಹಸುವನ್ನು ಕದ್ದಿದ್ದ ಎಂಬ ಆರೋಪದಲ್ಲಿ ಊರಿನ ಜನರು ಆತನ ತಲೆ ಹಾಗೂ ಮೀಸೆಯನ್ನು ಅರ್ಧ ಬೋಳಿಸಲು ನಿರ್ಧರಿಸಿದರು. ಆತನ ಮುಖಕ್ಕೆ ಮಸಿ ಬಳಿದು ಊರೆಲ್ಲಾ ಮೆರವಣಿಗೆ ಮಾಡಿದ್ದಾರೆ,” ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಎರಡು ದಿನಗಳಿಗೆ ಹಸು ಕಾಣೆಯಾಗಿತ್ತು. ಅನುಮಾನದ ಬಂದ ಮೇಲೆ ಸೀತಾರಾಮ್ ಎಂಬಾತನನ್ನು ಹಿಡಿದ ಗ್ರಾಮಸ್ಥರು, ಆತನಿಂದ ವಿಚಾರ ತಿಳಿದಿದ್ದಾರೆ. ತಾನು ಮತ್ತೊಬ್ಬ ವ್ಯಕ್ತಿ ಜೊತೆ ಸೇರಿಕೊಂಡು ಹಸುವನ್ನು ಕದ್ದಿದ್ದಾಗಿ ಸೀತಾರಾಮ್ ಹೇಳಿದ್ದಾನೆ.

ಘಟನೆಯ ವಿಡಿಯೋ ವೈರಲ್‌ ಆಗಿದ್ದು, ಜಬಾಲ್ಪುರ ನಾಕಾ ಪೊಲೀಸ್ ಪೋಸ್ಟ್‌ನ ಇನ್‌-ಚಾರ್ಜ್ ಅಧಿಕಾರಿ ಆರ್‌ ಬಿ ಪಾಂಡೆ ಈ ಊರಿಗೆ ಬಂದು ಆಪಾದಿತನನ್ನು ಠಾಣೆಗೆ ಕರೆತಂದಿದ್ದಾರೆ. ಘಟನೆ ಸಂಬಂಧ ವರದಿ ಸಲ್ಲಿಸಲಾಗಿದ್ದು , ತನಿಖೆ ಆಧಾರ ಮೇಲೆ ಕ್ರಮ ತೆಗೆದುಕೊಳ್ಳುವುದಾಗಿ ಈ ಅಧಿಕಾರಿ ತಿಳಿಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...