alex Certify ದಾರಿ ತಪ್ಪಿದ ಪತ್ನಿ: ಪ್ರಿಯಕರನೊಂದಿಗೆ ಸೇರಿ ಪತಿ ಕೊಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಾರಿ ತಪ್ಪಿದ ಪತ್ನಿ: ಪ್ರಿಯಕರನೊಂದಿಗೆ ಸೇರಿ ಪತಿ ಕೊಲೆ

ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಪ್ರಿಯಕರನೊಂದಿಗೆ ಸೇರಿ ಪತ್ನಿಯೇ ಕೊಲೆ ಮಾಡಿದ್ದ ಪ್ರಕರಣವನ್ನು ಶಿಡ್ಲಘಟ್ಟ ಪೊಲೀಸರು ಭೇದಿಸಿದ್ದಾರೆ.

ಶಿಡ್ಲಘಟ್ಟ ತಾಲೂಕಿನ ಗುಂಜಿಗುಂಟೆ ಗ್ರಾಮದ ಮೆಹರ್ ಮತ್ತು ಪ್ರಿಯಕರ ಬುರುಡಗುಂಟೆಯ ತೌಸಿಫ್ ಬಂಧಿತರಾಗಿದ್ದು, ಇಬ್ಬರೂ ಜೈಲು ಸೇರಿದ್ದಾರೆ. ಮೆಹರ್ ಮತ್ತು ದಾದಾಪೀರ್ ಅವರಿಗೆ ಮದುವೆಯಾಗಿ ವರ್ಷಗಳೇ ಕಳೆದರೂ ಮಕ್ಕಳಾಗಿರಲಿಲ್ಲ. ಅದೇ ಗ್ರಾಮದ ಪರಿಚಿತ ವ್ಯಕ್ತಿ ತೌಸಿಫ್ ಜೊತೆಗೆ ಮೆಹರ್ ಅಕ್ರಮ ಸಂಬಂಧ ಬೆಳೆಸಿದ್ದಳು. ಈ ವಿಚಾರ ತಿಳಿದ ದಾದಾಪೀರ್ ಹಿರಿಯರೊಂದಿಗೆ ಪಂಚಾಯಿತಿ ಮಾಡಿ ಬುದ್ದಿವಾದ ಹೇಳಿಸಿದ್ದಾನೆ.

ಗಂಡನಿದ್ದರೆ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತದೆ ಎನ್ನುವ ಕಾರಣಕ್ಕೆ ಮೆಹರ್ ಪ್ರಿಯಕರ ತೌಸಿಫ್ ನೊಂದಿಗೆ ಸೇರಿ ಕೋಳಿ ಸುಡುವ ಗನ್ ನಿಂದ ದಾದಾಪೀರ್ ನನ್ನು ಸುಟ್ಟು ಬೆಂಕಿ ತಗುಲಿ ಮೃತಪಟ್ಟಿರುವುದಾಗಿ ಬಿಂಬಿಸಿದ್ದರು. ತನಿಖೆ ಕೈಗೊಂಡ ಪೊಲೀಸರು ಪ್ರಕರಣವನ್ನು ಭೇದಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...