alex Certify ಪ್ರೀತಿಸಿ ಮದುವೆಯಾದ ಪುತ್ರಿ, ಕೆಂಡಾಮಂಡಲನಾಗಿ ಎಲ್ಲರೆದುರಲ್ಲೇ ಜುಟ್ಟು ಹಿಡಿದು ಎಳೆದೊಯ್ದ ತಂದೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರೀತಿಸಿ ಮದುವೆಯಾದ ಪುತ್ರಿ, ಕೆಂಡಾಮಂಡಲನಾಗಿ ಎಲ್ಲರೆದುರಲ್ಲೇ ಜುಟ್ಟು ಹಿಡಿದು ಎಳೆದೊಯ್ದ ತಂದೆ

ಮೈಸೂರು: ಪ್ರೀತಿಸಿ ಮದುವೆಯಾಗಿದ್ದ ಮಗಳ ವಿರುದ್ಧ ತಂದೆ ಕೆಂಡಾಮಂಡಲವಾದ ಘಟನೆ ನಡೆದಿದೆ. ಪ್ರೀತಿಸಿ ಮದುವೆಯಾಗಿದ್ದ ಮಗಳ ಜುಟ್ಟು ಹಿಡಿದು ತಂದೆ ಎಳೆದುಕೊಂಡು ಹೋಗಿದ್ದಾರೆ.

ಮೈಸೂರು ಜಿಲ್ಲೆ ನಂಜನಗೂಡು ಉಪನೋಂದಣಾಧಿಕಾರಿ ಕಚೇರಿಯಲ್ಲಿ ಘಟನೆ ನಡೆದಿದೆ. ಪೋಷಕರ ವಿರೋಧದ ನಡುವೆಯೂ ಮಹೇಂದ್ರ ಮತ್ತು ಚೈತ್ರಾ ಮದುವೆಯಾಗಿದ್ದರು. ಮದುವೆಯಾದ ನಂತರ ನೋಂದಣಿ ಮಾಡಿಸಲು ನೋಂದಣಾಧಿಕಾರಿ ಕಚೇರಿಗೆ ಹೋಗಿದ್ದರು.

ಮದುವೆ ನೋಂದಣಿ ಮಾಡಿಸಿಕೊಂಡು ಹೊರಗೆ ಬರುತ್ತಿದ್ದಾಗ ಗಲಾಟೆಯಾಗಿದ್ದು, ಚೈತ್ರಾ ಜುಟ್ಟು ಹಿಡಿದು ತಂದೆ ಬಸವರಾಜನಾಯ್ಕ ಎಳೆದುಕೊಂಡು ಹೋಗಿದ್ದಾರೆ. ಗಲಾಟೆಯ ಬಳಿಕ ರಕ್ಷಣೆ ಕೋರಿ ನಂಜನಗೂಡು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...