alex Certify ರೈಲ್ವೆ ಚಾಲಕರ ಸಮಯ ಪ್ರಜ್ಞೆಯಿಂದ ಉಳಿಯಿತು ಗಜರಾಜನ ಜೀವ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈಲ್ವೆ ಚಾಲಕರ ಸಮಯ ಪ್ರಜ್ಞೆಯಿಂದ ಉಳಿಯಿತು ಗಜರಾಜನ ಜೀವ..!

ರೈಲ್ವೆ ಹಳಿಯ ಮೇಲೆ ದಾಟುತ್ತಿರುವಾಗ ಪ್ರಾಣ ಕಳೆದುಕೊಂಡ ಅದೆಷ್ಟೋ ಆನೆಗಳ ಬಗ್ಗೆ ನೀವು ಕೇಳಿರ್ತೀರಾ. ಇದೊಂದು ದುಃಖಕರ ಸುದ್ದಿಯಾಗಿದ್ದರೂ ಸಹ ಇಂತಹ ಘಟನೆಗಳು ಪದೇ ಪದೇ ಮರುಳಿಸುತ್ತಲೇ ಇರುತ್ತದೆ.

ಆದರೆ ಸೋಶಿಯಲ್​ ಮೀಡಿಯಾದಲ್ಲಿ ಪ್ರಸ್ತುತ ವೈರಲ್​ ಆಗಿರುವ ವಿಡಿಯೋದಲ್ಲಿ ರೈಲ್ವೆ ಹಳಿಯನ್ನು ದಾಟುತ್ತಿದ್ದ ಆನೆ ಪ್ರಾಣ ರಕ್ಷಿಸುವಲ್ಲಿ ರೈಲ್ವೆ ಚಾಲಕರು ಯಶಸ್ವಿಯಾಗಿದ್ದನ್ನು ಕಾಣಬಹುದಾಗಿದೆ.

ಆನೆಯು ರೈಲ್ವೆ ಹಳಿಯನ್ನು ದಾಟುತ್ತಿರೋದನ್ನು ಗಮನಿಸಿದ ಚಾಲಕರು ಸರಿಯಾದ ಸಮಯಕ್ಕೆ ಬ್ರೇಕ್​ ಹಾಕಿದ್ದಾರೆ. ರೈಲ್ವೆ ಹಳಿಯನ್ನು ದಾಟಿದ ಆನೆಯು ಆರಾಮಾಗಿ ಕಾಡಿನೊಳಕ್ಕೆ ಎಂಟ್ರಿ ಕೊಟ್ಟಿದ್ದನ್ನೂ ಈ ವಿಡಿಯೋದಲ್ಲಿ ಕಾಣಬಹುದಾಗಿದೆ. ಅಂದಹಾಗೆ ಈ ಘಟನೆಯು ಪಶ್ಚಿಮ ಬಂಗಾಳದ ನಾಗ್ರಕಟ – ಚಾಸ್ಲಾ ಮಧ್ಯದಲ್ಲಿ ಸಂಭವಿಸಿದೆ. ರೈಲ್ವೆ ಚಾಲಕರ ಸಮಯ ಪ್ರಜ್ಞೆಗೆ ನೆಟ್ಟಿಗರು ಶಹಬ್ಬಾಸ್​ ಎಂದಿದ್ದಾರೆ.

— DRM APDJ (@drm_apdj) August 25, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...