alex Certify ಜನನಿಬಿಡ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷ: ಬೆಚ್ಚಿಬಿದ್ದ ಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜನನಿಬಿಡ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷ: ಬೆಚ್ಚಿಬಿದ್ದ ಜನ

ಶ್ರೀನಗರದ ನಾತಿಪೋರಾ ಏರಿಯಾದಲ್ಲಿ ಭಾನುವಾರ ಜನನಿಬಿಡ ಪ್ರದೇಶದಲ್ಲೇ ಚಿರತೆಯೊಂದು ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. ಎರಡು ವಾರದ ಹಿಂದೆಯಷ್ಟೇ ಅಪ್ರಾಪ್ತ ಬಾಲಕಿಯ ಮೇಲೆ ಚಿರತೆಯೊಂದು ದಾಳಿ ನಡೆಸಿದ್ದು, ಈ ಬಳಿಕ ಇದನ್ನ ನರಹಂತಕ ಚಿರತೆ ಎಂದು ಕರೆಯಲಾಗಿತ್ತು.

ಈ ಚಿರತೆಯನ್ನ ಸೆರೆಹಿಡಿಯುವ ಸಲುವಾಗಿ ಸಿಬ್ಬಂದಿಯನ್ನ ನಿಯೋಜಿಸಲಾಗಿದೆ. ಯಾವುದೇ ಪ್ರಾಣ ಹಾನಿ ಸಂಭವಿಸೋದಕ್ಕೂ ಮುನ್ನವೇ ಚಿರತೆಯನ್ನ ಸೆರೆಹಿಡಿಯಬೇಕೆಂದು ಈಗಾಗಲೇ ನಾತಿಪೋರಾ ಪ್ರದೇಶದಲ್ಲಿ ವನ್ಯಜೀವಿ ವಿಭಾಗದ ಸಿಬ್ಬಂದಿಯನ್ನ ನಿಯೋಜಿಸಲಾಗಿದೆ.

ಚಿರತೆಯನ್ನ ನಾವು ನಿನ್ನೆ ರಾತ್ರಿ 10 ಗಂಟೆಗೆ ಸುಮಾರಿಗೆ ನೋಡಿದ್ದು ಕೂಡಲೇ ಹತ್ತಿರದ ಪೊಲೀಸ್​ ಠಾಣೆಗೆ ಮಾಹಿತಿ ನೀಡಿದ್ದೇವೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

ಚಿರತೆಯನ್ನ ಸೆರೆ ಹಿಡಿಯುವವರೆಗೂ ಅನಗತ್ಯವಾಗಿ ಮನೆಯಿಂದ ಹೊರಬಾರದಂತೆ ಸ್ಥಳೀಯ ನಿವಾಸಿಗಳಿಗೆ ಎಚ್ಚರಿಕೆ ನೀಡಲಾಗಿದೆ.

ಧ್ವನಿವರ್ಧಕಗಳ ಸಹಾಯದಿಂದ ಸ್ಥಳೀಯ ನಿವಾಸಿಗಳು ಚಿರತೆ ಪ್ರತ್ಯಕ್ಷವಾಗಿರೋದ್ರ ಬಗ್ಗೆ ಜನತೆಗೆ ಮಾಹಿತಿಯನ್ನ ತಲುಪಿಸುತ್ತಿದ್ದಾರೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಕಾಶ್ಮೀರದ ವನ್ಯಜೀವಿ ವಾರ್ಡನ್​ ರಶೀದ್​ ನಖಾಶ್​, ಈ ಪ್ರದೇಶದಲ್ಲಿ ನಮ್ಮ ತಂಡವನ್ನ ನಿಯೋಜಿಸಿದ್ದೇವೆ. ಚಿರತೆಯನ್ನ ಸೆರೆಹಿಡಿಯಲು ಎಲ್ಲಾ ರೀತಿಯ ಪ್ರಯತ್ನಗಳನ್ನ ಮಾಡಲಾಗ್ತಿದೆ ಎಂದು ಮಾಹಿತಿ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...