alex Certify ‘ಅಶ್ವತ್ಥಾಮ’ನಿಗಾಗಿ ಒಂದಾದ್ರು ಅನೂಪ್ ಭಂಡಾರಿ – ಕಿಚ್ಚ ಸುದೀಪ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಅಶ್ವತ್ಥಾಮ’ನಿಗಾಗಿ ಒಂದಾದ್ರು ಅನೂಪ್ ಭಂಡಾರಿ – ಕಿಚ್ಚ ಸುದೀಪ್

ಸ್ಯಾಂಡಲ್ ವುಡ್ ನಿರ್ದೇಶಕ ಅನೂಪ್ ಭಂಡಾರಿ ಹಾಗೂ ಕಿಚ್ಚ ಸುದೀಪ್ ‘ಅಶ್ವತ್ಥಾಮ’ನ ಮೂಲಕ ಮತ್ತೆ ಒಂದಾಗುತ್ತಿದ್ದಾರೆ.

ಮುಂಬರುವ ಬಹಳ ಮಹತ್ವಕಾಂಕ್ಷೆಯ ಚಿತ್ರ ʼವಿಕ್ರಾಂತ್ ರೋಣʼ ಬಿಡುಗಡೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇದೇ ವೇಳೆ ಚಿತ್ರತಂಡ ಮತ್ತೊಂದು ವಿಷಯವನ್ನು ಖಚಿತಪಡಿಸಿದೆ.

ಕಿಚ್ಚ ಸುದೀಪ್ ಅಭಿಮಾನಿಗಳ ಅತಿರೇಕದ ವರ್ತನೆ, ಕೋಣ ಬಲಿ ಕೊಟ್ಟು ಕಟೌಟ್ ಗೆ ರಕ್ತಾಭಿಷೇಕ

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಕಿಚ್ಚ ಸುದೀಪ್, ವೈಜ್ಞಾನಿಕ ಕಾದಂಬರಿ, ಫ್ಯಾಂಟಸಿ ಮುಂದಾದ ಕಥೆಗಳ ಬಗ್ಗೆ ಅವರು ಆಸಕ್ತಿ ಹೊಂದಿರುವುದಾಗಿ ಹೇಳಿಕೊಂಡಿದ್ದರು. ಅನೂಪ್ ಭಂಡಾರಿಯವರ ‘ಅಶ್ವತ್ಥಾಮ’ ಬಗ್ಗೆ ಉತ್ಸುಕರಾಗಿದ್ದಾರೆ ಹಾಗೂ ಸ್ಕ್ರಿಪ್ಟಿಂಗ್ ಮುಗಿದ ನಂತರ ಚಿತ್ರದಲ್ಲಿ ಕೆಲಸ ಮಾಡಲು ಉತ್ಸುಕರಾಗಿದ್ದಾರೆ. ಈ ಚಿತ್ರವನ್ನು ಸ್ವತಃ ಸುದೀಪ್ ಅವರೇ ನಿರ್ಮಿಸಲಿದ್ದಾರೆ. ಈ ಬಗ್ಗೆ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ.

ಇನ್ನು ನಿರ್ದೇಶಕ ಅನೂಪ್ ಭಂಡಾರಿ ಮಾತನಾಡುತ್ತಾ, “ಈ ಚಿತ್ರಕ್ಕಾಗಿ ಕೆಲವು ವರ್ಷಗಳು ತಯಾರಿ ನಡೆಸಿದ್ದೆ. ಇದನ್ನು ಶೀಘ್ರದಲ್ಲೇ ತೆರೆ ಮೇಲೆ ತರಲು ಬಹಳ ಉತ್ಸುಕನಾಗಿದ್ದು, ಸ್ಕ್ರಿಪ್ಟಿಂಗ್ ಕೆಲಸ ಬಾಕಿಯಿದೆ. ಹೀಗಾಗಿ ಆದಷ್ಟು ಬೇಗನೆ ಅಧಿಕೃತವಾಗಿ ಘೋಷಣೆ ಮಾಡಲಾಗುವುದು” ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...