alex Certify BIG NEWS: ಎಲ್ಲರನ್ನು ಹಿಂದಿಕ್ಕಿ ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಪ್ರಮುಖ ಆಯ್ಕೆ, ಇನ್ನೂ ರೇಸ್ ನಲ್ಲಿ ಗೆಹ್ಲೋಟ್; ಸೆಲ್ಜಾ, ವೇಣು, ತರೂರ್, ಬನ್ಸಾಲ್ ಸೇರಿ ಹಲವರ ಹೆಸರೂ ಪರಿಗಣನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಎಲ್ಲರನ್ನು ಹಿಂದಿಕ್ಕಿ ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಪ್ರಮುಖ ಆಯ್ಕೆ, ಇನ್ನೂ ರೇಸ್ ನಲ್ಲಿ ಗೆಹ್ಲೋಟ್; ಸೆಲ್ಜಾ, ವೇಣು, ತರೂರ್, ಬನ್ಸಾಲ್ ಸೇರಿ ಹಲವರ ಹೆಸರೂ ಪರಿಗಣನೆ

ನವದೆಹಲಿ: ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಪ್ರಮುಖ ಆಯ್ಕೆಯಾಗಿದ್ದಾರೆ ಎಂದು ಹೇಳಲಾಗಿದ್ದರೂ ಆಟ ಇನ್ನೂ ಮುಂದುವರೆದಿದೆ.

ಖರ್ಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಉನ್ನತ ಅಭ್ಯರ್ಥಿಯಾಗಿ ಹೊರಹೊಮ್ಮುತ್ತಿದ್ದಾರೆ. ಗೆಹ್ಲೋಟ್ ಇನ್ನೂ ರೇಸ್ ನಲ್ಲಿದ್ದಾರೆ. ಗುರುವಾರ ನಾಮನಿರ್ದೇಶನಕ್ಕೆ ನಾಯಕರನ್ನು ಕರೆಯಲಾಗಿದೆ ಎಂದು ಹೇಳಲಾಗಿದೆ.

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಇನ್ನೂ ರೇಸ್ ನಿಂದ ಹೊರಗುಳಿದಿಲ್ಲ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿದ್ದು, ಕುಮಾರಿ ಸೆಲ್ಜಾ ಅವರ ಹೆಸರು ಕೂಡ ಪರಿಗಣನೆಯಲ್ಲಿದೆ, ರಾಹುಲ್ ಗಾಂಧಿ ಅವರ ಆಯ್ಕೆ ಕೆ.ಸಿ. ವೇಣುಗೋಪಾಲ್ ಅವರಾಗಿದ್ದಾರೆ.

ಕಾಂಗ್ರೆಸ್ ಖಜಾಂಚಿ ಪವನ್ ಕುಮಾರ್ ಬನ್ಸಾಲ್ ಅವರು ನಾಮಪತ್ರ ಸಲ್ಲಿಸಲಿದ್ದಾರೆ. ಸಿಇಎ ಅಧ್ಯಕ್ಷ ಮಧುಸೂದನ್ ಮಿಸ್ತ್ರಿ ಮಾಹಿತಿ ನೀಡಿ, ಇಲ್ಲಿಯವರೆಗೆ ಶಶಿ ತರೂರ್ ಮತ್ತು ಪವನ್ ಬನ್ಸಾಲ್ ಅವರು ಸಿಇಎಯಿಂದ ನಾಮನಿರ್ದೇಶನ ಫಾರ್ಮ್‌ಗಳನ್ನು ತೆಗೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್‌ನ ಹಿರಿಯ ನಾಯಕ ಕಮಲ್‌ನಾಥ್‌ ಅವರ ಹೆಸರೂ ಕೇಳಿಬಂದಿದ್ದು, ಸೋಮವಾರ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿದ್ದ ಅವರು, ನಾನು ಪಕ್ಷದ ರಾಷ್ಟ್ರೀಯ ಮುಖ್ಯಸ್ಥನಾಗಲು ಬಯಸುವುದಿಲ್ಲ. ಮಧ್ಯಪ್ರದೇಶದಲ್ಲಿ ಪಕ್ಷಕ್ಕಾಗಿ ಕೆಲಸ ಮಾಡಲು ಬಯಸುತ್ತೇನೆ ಎಂದು ಹೇಳಿದ್ದಾರೆ.

ರಾಜಸ್ಥಾನದಲ್ಲಿ ಉಲ್ಬಣಗೊಳ್ಳುತ್ತಿರುವ ಹೈಡ್ರಾಮಾ ಪಕ್ಷದ ಉನ್ನತ ಹುದ್ದೆಗಾಗಿ ಪ್ಲಾನ್ ಬಿ ಬಗ್ಗೆ ಯೋಚಿಸುವಂತೆ ಮಾಡಿದೆ, ಇದಕ್ಕಾಗಿ ಅಧ್ಯಕ್ಷ ಸ್ಥಾನಕ್ಕೆ ಗೆಹ್ಲೋಟ್ ಅವರನ್ನು ಸ್ಪರ್ಧಿಯಾಗಿ ನೋಡಲಾಗುತ್ತಿದೆ. ಅವರ ಬೆಂಬಲಿಗ ಶಾಸಕರ ಒತ್ತಡದ ಕಾರಣ ಅನಿಶ್ಚಿತತೆ ಎದುರಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...